ಭವಭೂತಿಯನ್ನು ಇಂದಿನ ಕಾಲಕ್ಕೆ ಹೋಲಿಸಿದರೆ ಕಾಳಿದಾಸನಿಗಿಂತ ಶ್ರೇಷ್ಠ ನಾಟಕಕಾರನಾಗಿ ಕಂಡು ಬರುತ್ತಾನೆ. ಚಿತ್ರ, ಕಾವ್ಯ, ನಾಟಕ, ಸಂಗೀತ ಹೀಗೆ ಹೊಸ ಹೊಸ ತಂತ್ರಗಳನ್ನು ಭವಭೂತಿ ನಾಟಕದಲ್ಲಿ ತಂದಿದ್ದಾನೆ. ಈತನ ಕಾವ್ಯ ಶರೀರ ನೋಡಿದಾಗ ಕಾಳಿದಾಸನಿಗಿಂತ ಭಿನ್ನವಾದ ಭಾಷೆಯನ್ನು ಬಳಸಿರುವುದು ಮನವರಿಕೆಯಾಗುತ್ತದೆ. ಉದ್ದುದ್ದ ಸಾಲುಗಳನ್ನು ಈತ ರಚಿಸಿರುವುದರಿಂದ ಅದನ್ನು ಕನ್ನಡಕ್ಕೆ ಭಾಷಾಂತರಿಸುವುದು ಸವಾಲಿನ ಕೆಲಸ. ಆದರೆ, ಬಿ.ಎಂ.ಶ್ರೀ, ಪು.ತಿ.ನ, ಕುವೆಂಪು, ಡಿ.ವಿ.ಜಿಯಂತಹ ನವೋದಯಕಾರರ ಕಾವ್ಯಗಳನ್ನು ಓದಿದಾಗ ಭವಭೂತಿಯ ನಾಟಕಗಳ ಭಾಷಾಂತರದಲ್ಲಿ ಯಶಸ್ವಿಯಾಗಬಹುದು ಎಂದು ಅಭಿಪ್ರಾಯಪಟ್ಟರು.