ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಚಂದ್ರಮೋಹನ್ ಮತ್ತು ಪತ್ನಿ ವನಿತಾ ಚಂದ್ರಮೋಹನ್ ಅವರು ಸೋಮವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದಿದ್ದಾಗ, ವಾಹನವೊಂದರಲ್ಲಿ ಬಂದ ಕೆಲವರು ಸೇತುವೆಯಿಂದ ನದಿಗೆ ಗೋಣಿಚೀಲದಿಂದ 300ಕ್ಕೂ ಹೆಚ್ಚು ಆಹ್ವಾನ ಪತ್ರಿಕೆಗಳನ್ನು ಸುರಿದಿದ್ದರು. ಅಲ್ಲಿದ್ದ ಆಹ್ವಾನ ಪತ್ರಿಕೆಯಲ್ಲಿದ್ದ ನಂಬರ್ಗೆ ಕರೆ ಮಾಡಿ ವಾಪಸ್ ಅವರನ್ನು ಕರೆಸಿದ ಚಂದ್ರಮೋಹನ್, ಅವರಿಂದಲೇ ಸುರಿದಿದ್ದ ಎಲ್ಲವನ್ನೂ ತೆಗೆಸಿದರು.