<p><strong>ಸುಂಟಿಕೊಪ್ಪ:</strong> ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಐಗೂರು ಗ್ರಾಮ ಪಂಚಾಯಿತಿಯ ಚಿನ್ನಳ್ಳಿಯ ಐಗೂರಿನ ನಾಲೆಗೆ ತಡೆಗೋಡೆ ನಿರ್ಮಿಸಿದ್ದು, ತಡೆಗೋಡೆಯ ಅಕ್ಕಪಕ್ಕ ಮಣ್ಣು ಹಾಕದೇ ಬಿಟ್ಟಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.</p>.<p>ತಡೆಗೋಡೆ ಕಾಮಗಾರಿ ಮುಗಿದ ನಂತರ ಗುತ್ತಿಗೆದಾರರು ಯಂತ್ರೋಪಕರಣದೊಂದಿಗೆ ಪಲಾಯನ ಮಾಡಿದ್ದಾರೆ. ತಡೆಗೋಡೆಯ ಎರಡು ಕಡೆ ಮಣ್ಣು ತುಂಬಿಸುವ ಕೆಲಸ ಮಾಡದೇ ಇದ್ದುದರಿಂದ ಸ್ಥಳೀಯರು ಕಾವೇರಿ ನೀರಾವರಿ ಎಂಜಿನಿಯರ್ಗೆ ಒತ್ತಡ ತಂದಿದ್ದರಿಂದ ಹೇರಿದ್ದರಿಂದ ಬೇಕಾಬಿಟ್ಟಿ ಕಾಂಕ್ರಿಟ್ ತಡೆಗೋಡೆಗೆ ಎರಡು ಬದಿ ಮಣ್ಣು ತುಂಬಿಸಿದ್ದಾರೆ.</p>.<p>ಐಗೂರು ಗ್ರಾಮದ ಜಿ.ಕೆ. ಬಾಲಕೃಷ್ಣ ಹಾಗೂ ಪಿ.ಕೆ. ಸೋಮಯ್ಯ ಅವರ ಜಾಗದಲ್ಲೂ ತಡೆಗೋಡೆಗೆ ಮಣ್ಣು ತುಂಬಿಸದೆ ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. </p>.<p>‘ಕಾಮಗಾರಿಯಲ್ಲಿ ರಾಜಕೀಯ ಇದೆಯಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಸರ್ಕಾರ ಜನರ ಹಿತಾಸಕ್ತಿಗೆ ಆದ್ಯತೆ ನೀಡಿ ಕಾಮಗಾರಿ ಕೆಲಸಗಳನ್ನು ನಿರ್ವಹಿಸುತ್ತಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ:</strong> ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಐಗೂರು ಗ್ರಾಮ ಪಂಚಾಯಿತಿಯ ಚಿನ್ನಳ್ಳಿಯ ಐಗೂರಿನ ನಾಲೆಗೆ ತಡೆಗೋಡೆ ನಿರ್ಮಿಸಿದ್ದು, ತಡೆಗೋಡೆಯ ಅಕ್ಕಪಕ್ಕ ಮಣ್ಣು ಹಾಕದೇ ಬಿಟ್ಟಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.</p>.<p>ತಡೆಗೋಡೆ ಕಾಮಗಾರಿ ಮುಗಿದ ನಂತರ ಗುತ್ತಿಗೆದಾರರು ಯಂತ್ರೋಪಕರಣದೊಂದಿಗೆ ಪಲಾಯನ ಮಾಡಿದ್ದಾರೆ. ತಡೆಗೋಡೆಯ ಎರಡು ಕಡೆ ಮಣ್ಣು ತುಂಬಿಸುವ ಕೆಲಸ ಮಾಡದೇ ಇದ್ದುದರಿಂದ ಸ್ಥಳೀಯರು ಕಾವೇರಿ ನೀರಾವರಿ ಎಂಜಿನಿಯರ್ಗೆ ಒತ್ತಡ ತಂದಿದ್ದರಿಂದ ಹೇರಿದ್ದರಿಂದ ಬೇಕಾಬಿಟ್ಟಿ ಕಾಂಕ್ರಿಟ್ ತಡೆಗೋಡೆಗೆ ಎರಡು ಬದಿ ಮಣ್ಣು ತುಂಬಿಸಿದ್ದಾರೆ.</p>.<p>ಐಗೂರು ಗ್ರಾಮದ ಜಿ.ಕೆ. ಬಾಲಕೃಷ್ಣ ಹಾಗೂ ಪಿ.ಕೆ. ಸೋಮಯ್ಯ ಅವರ ಜಾಗದಲ್ಲೂ ತಡೆಗೋಡೆಗೆ ಮಣ್ಣು ತುಂಬಿಸದೆ ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. </p>.<p>‘ಕಾಮಗಾರಿಯಲ್ಲಿ ರಾಜಕೀಯ ಇದೆಯಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಸರ್ಕಾರ ಜನರ ಹಿತಾಸಕ್ತಿಗೆ ಆದ್ಯತೆ ನೀಡಿ ಕಾಮಗಾರಿ ಕೆಲಸಗಳನ್ನು ನಿರ್ವಹಿಸುತ್ತಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>