ಸೋಮವಾರಪೇಟೆ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಚಕ್ರವರ್ತಿ ಬಸ್ ಮಾಲೀಕ ಕೆ.ಬಿ. ಸುರೇಶ್ ಅವರಿಗೆ ಅಪರಿಚಿತರು ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
‘ಶನಿವಾರ ಸಂಜೆ ಮಡಿಕೇರಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಕಾರು ಡಿಕ್ಕಿ ಹೊಡೆಯಿತು, ಕೆಳಗೆ ಬಿದ್ದ ಮೇಲೆ ಮತ್ತೊಂದು ಜೀಪ್ನಿಂದ ಬೈಕ್ಗೆ ಡಿಕ್ಕಿ ಹೊಡೆದರು. ಇದೊಂದು ಕೊಲೆ ಯತ್ನ’ ಎಂದು ಸುರೇಶ್ ದೂರು ನೀಡಿದ್ದಾರೆ.
ಡಿಕ್ಕಿಪಡಿಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.