ಮೂರು ದಶಕಗಳ ಹಿಂದೆಯೇ ಕಾಫಿ ಚಳವಳಿಯನ್ನು ಬರಹಗಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನ ಮಾಡಿ ಮುನ್ನಡೆಸಿದ್ದರು. ಅವರ ಮೂಲ ಆಶಯವೇ ಕಾಫಿ ಬೆಳೆಗಾರರು, ಹೋಬಳಿ ಮಟ್ಟದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡು ತಮ್ಮ ಉತ್ಪನ್ನವನ್ನು ದೇಶೀಯವಾಗಿ ಮಾರಾಟ ಮಾಡಬೇಕು ಹಾಗೂ ಹೊರದೇಶಗಳಲ್ಲಿ ನೇರವಾಗಿ ರಫ್ತು ಮಾಡಿ ವಿದೇಶಿ ವಿನಿಮಯ ಗಳಿಸಿ ಮಾರುಕಟ್ಟೆ ಸ್ವಾಮ್ಯವನ್ನು ಹೊಂದಬೇಕು ಎಂದಾಗಿತ್ತು. ಅವರ ಕನಸು, ಚಿಂತನೆಯ ಫಲವಾಗಿ ‘ಚಿಹಾಕೊ ಕಾಫಿ’ ಸಹಕಾರ ಸಂಗಮ ಆರಂಭಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.