ಎಲ್ಲಿ ನೋಡಿದರೂ ಮದ್ಯದ ಬಾಟಲಿಗಳು. ಸಂಜೆಯಾದರೆ ಬೆಟ್ಟಕ್ಕೆ ಹೋಗಲು ಭಯ ಎಂದು ಸಾರ್ವಜನಿಕರ ದೂರಾಗಿತ್ತು.
ಉದ್ಯಮಿ ಸುರೇಶ್ ಮಾತನಾಡಿ, ‘ಮಕ್ಕಳಗುಡಿ ಬೆಟ್ಟವು ನಿರ್ವಹಣೆ ಇಲ್ಲದೆ ರಸ್ತೆಯಲ್ಲಿ ಗಿಡಗಂಟೆಗಳು ಬೆಳೆದು ದಾರಿಯೇ ಕಾಣದಾಗಿತ್ತು. ಪುಂಡಪೋಕರಿಗಳ ಆವಾಸ ಸ್ಥಳವಾಗಿದೆ. ಸಾರ್ವಜನಿಕರಿಗೂ, ಪ್ರವಾಸಿಗರಿಗೂ ಹೋಗದಂತ ಪರಿಸ್ಥಿತಿ ಇತ್ತು. ಇದರ ಬಗ್ಗೆ ಸ್ಥಳೀಯ ಪಂಚಾಯಿತಿ ಬಗ್ಗೆ ಗಮನ ಹರಿಸಬೇಕು. ಇಲ್ಲಿನ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದರ ಸ್ವಚ್ಛತೆಗೆ ಗಮನ ಹರಿಸಬೇಕು’ ಎಂದರು.