ಸುಂಟಿಕೊಪ್ಪ: ಕೊಡಗಿಗೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಬಾಣಸವಾಡಿ ಎಚ್ಡಿಎಫ್ಸಿ ಬ್ಯಾಂಕ್ನ ವ್ಯವಸ್ಥಾಪಕ ಕಾರ್ತಿಕ್ (34) ಏಳನೇ ಹೊಸ ಕೋಟೆ ಬಳಿಯ ರೆಸಾರ್ಟ್ನಲ್ಲಿ ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪ್ರವಾಸಿ ತಾಣ ವೀಕ್ಷಿಸಲು ಸ್ನೇಹಿತನ ಕುಟುಂಬದೊಂದಿಗೆ ಬಂದಿದ್ದ ಅವರು ಹಾರಂಗಿ ಹಿನ್ನೀರಿನ ರೆಸಾರ್ಟ್ನಲ್ಲಿ ಉಳಿದುಕೊಂಡಿ ದ್ದರು .ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ರವಾನಿಸುವ ವೇಳೆ ಮೃತಪಟ್ಟರು.