ಕೆಲವು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಮನು, ಮಂಗಳವಾರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಾಗಿ ಗಂಟಲು ದ್ರವದ ಮಾದರಿ ಕೊಟ್ಟು ಬಂದಿದ್ದ. ಬುಧವಾರ ಜ್ವರದಿಂದ ನಿತ್ರಾಣಗೊಂಡು ಮಧ್ಯಾಹ್ನ 12.30ಕ್ಕೆ ಆಂಬುಲೆನ್ಸ್ಗೆ ಕರೆ ಮಾಡಿದ್ದಾನೆ. ಆಂಬುಲೆನ್ಸ್ ಬರುವ ಮುನ್ನವೇ ರಸ್ತೆ ಮೇಲೆ ಬಿದ್ದು ನರಳಿದ್ದಾನೆ, ಅಷ್ಟೊತ್ತಿಗೆ ಆಂಬುಲೆನ್ಸ್ ಬಂದಿದೆ, ಆರೋಗ್ಯ ಸಿಬ್ಬಂದಿ ಕರೆದೊಯ್ಯುವ ದಾರಿ ಮಧ್ಯೆ ಯುವಕ ಮೃತಪಟ್ಟಿದ್ದಾನೆ.