ಜೂ.27 ರಂದು ಔಷಧಿ ಖರೀದಿಸಲು ಅಮ್ಮತ್ತಿ ಪಟ್ಟಣಕ್ಕೆ ಹೋದ ಸಂದರ್ಭ ಜವರಮ್ಮ ಅವರಿಗೆ ಹಸು ತಿವಿದಿತ್ತು. ನೆಲಕ್ಕೆ ಬಿದ್ದ ಜವರಮ್ಮ ಅವರ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಅಮ್ಮತ್ತಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೇಸೋಮವಾರ ಜವರಮ್ಮ ಮೃತಪಟ್ಟಿದ್ದಾರೆ.