ತೀವ್ರ ಅಸ್ವಸ್ಥಗೊಂಡಿದ್ದ ಈ ಆನೆಗೆ, ಎರಡು ದಿನಗಳಿಂದ ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಚಿಕಿತ್ಸೆ ನೀಡುತ್ತಿದ್ದರು. ನಿತ್ರಾಣಗೊಂಡಿದ್ದ ಅದನ್ನು, ದುಬಾರೆ ಶಿಬಿರದ ಸಾಕಾನೆಗಳ ನೆರವಿನಿಂದ ಎಬ್ಬಿಸಿ ನಿಲ್ಲಿಸುವ ಪ್ರಯತ್ನವನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತು.