<p><strong>ಶನಿವಾರಸಂತೆ:</strong> ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದ ಮಾವಿನ ಕಟ್ಟೆ ಬಳಿ ಭಾನುವಾರ ಎಂಟು ಕಾಡಾನೆಗಳ ಗುಂಪು ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದೆ.</p>.<p>ದಾಳಿಗೆ ಸಿಲುಕಿದ ದೊಡ್ಡಕೊಡ್ಲಿ ಗ್ರಾಮದ ಸತೀಶ್ ಹಾಗೂ ದೇವರಾಜ್ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆನೆಗಳು ಸೊಂಡಿಲಿನಿಂದ ತಳ್ಳುತ್ತಿದ್ದಂತೆ ಬೈಕ್ ಸಮೇತ ಇಬ್ಬರೂ ಗುಂಡಿಯೊಳಗೆ ಬಿದ್ದಿದ್ದಾರೆ. ನಂತರ ಅಲ್ಲಿಂದ ಆನೆಗಳು ಮುಂದೆ ಸಾಗಿವೆ.</p>.<p>ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ, ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.</p>.<p>ಕಾಡಾನೆಗಳ ಗುಂಪು ಬಸವೇಶ್ವರ ದೇವಾಲಯದ ಬಳಿಯೇ ಬೀಡು ಬಿಟ್ಟಿವೆ. ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಕೊಟ್ರೇಶ್ ತಿಳಿಸಿದರು.</p>.<p>ಉಪ ವಲಯಾಧಿಕಾರಿ ಸತೀಶ್, ಅರಣ್ಯ ಸಿಬ್ಬಂದಿ ಪ್ರಕಾಶ್, ಶಿವರಾಜ್, ರಾಮಕೃಷ್ಣ, ಭರತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ:</strong> ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದ ಮಾವಿನ ಕಟ್ಟೆ ಬಳಿ ಭಾನುವಾರ ಎಂಟು ಕಾಡಾನೆಗಳ ಗುಂಪು ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿದೆ.</p>.<p>ದಾಳಿಗೆ ಸಿಲುಕಿದ ದೊಡ್ಡಕೊಡ್ಲಿ ಗ್ರಾಮದ ಸತೀಶ್ ಹಾಗೂ ದೇವರಾಜ್ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆನೆಗಳು ಸೊಂಡಿಲಿನಿಂದ ತಳ್ಳುತ್ತಿದ್ದಂತೆ ಬೈಕ್ ಸಮೇತ ಇಬ್ಬರೂ ಗುಂಡಿಯೊಳಗೆ ಬಿದ್ದಿದ್ದಾರೆ. ನಂತರ ಅಲ್ಲಿಂದ ಆನೆಗಳು ಮುಂದೆ ಸಾಗಿವೆ.</p>.<p>ವಿಷಯ ತಿಳಿದು ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ, ಪರಿಶೀಲನೆ ನಡೆಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.</p>.<p>ಕಾಡಾನೆಗಳ ಗುಂಪು ಬಸವೇಶ್ವರ ದೇವಾಲಯದ ಬಳಿಯೇ ಬೀಡು ಬಿಟ್ಟಿವೆ. ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುವುದು ಎಂದು ಕೊಟ್ರೇಶ್ ತಿಳಿಸಿದರು.</p>.<p>ಉಪ ವಲಯಾಧಿಕಾರಿ ಸತೀಶ್, ಅರಣ್ಯ ಸಿಬ್ಬಂದಿ ಪ್ರಕಾಶ್, ಶಿವರಾಜ್, ರಾಮಕೃಷ್ಣ, ಭರತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>