ಮಡಿಕೇರಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿ ಇಡೀ ಧಾರಾಕಾರವಾಗಿ ಮಳೆ ಸುರಿದಿದೆ. ಸ್ವಲ್ಪವೂ ಬಿಡುವು ನೀಡದ ಮಳೆ ಜೋರು ಗಾಳಿಯೊಂದಿಗೆ ರಭಸದಿಂದ ಸುರಿದಿದ್ದು ಹಲವೆಡೆ ಮರಗಳು ಧರೆಗುರುಳಿವೆ.
ವಿರಾಜಪೇಟೆ ಮಾಕುಟ್ಟ ರಾಜ್ಯ ಹೆದ್ದಾರಿಗೆ ರಾತ್ರಿ ಉರುಳಿದ ಮರವನ್ನು ರಕ್ಷಣಾ ತಂಡ ಶನಿವಾರ ನಸುಕಿನ ಹೊತ್ತಿಗೆ ತೆರವುಗೊಳಿಸಿದೆ. ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಬಿದ್ದ ಮರವನ್ನೂ ತೆರವುಗೊಳಿಸಲಾಗಿದೆ.