<p>ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಮಳೆಗಾಲ ಮುಗಿಯುವವರೆಗೂ ಕಟ್ಟುನಿಟ್ಟಾಗಿ ತಡೆದು, ಗ್ರಾಮೀಣ ರಸ್ತೆಗಳನ್ನು ರಕ್ಷಿಸಬೇಕು ಎಂದು ಬೆಳೆಗಾರರಾದ ಬಿಳಿಗೇರಿ ಗ್ರಾಮದ ಮಂಞ್ಙೀರ ಉಮೇಶ್ ಅಪ್ಪಣ್ಣ ಒತ್ತಾಯಿಸಿದರು.</p>.<p>ಜಿಲ್ಲಾಧಿಕಾರಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದರೆ, ಅದು ಇನ್ನೂ ಜಾರಿಯಾಗಿಲ್ಲ. ಒಮ್ಮೆ ಜಿಲ್ಲೆಯ ಗ್ರಾಮೀಣ ರಸ್ತೆಗಳಲ್ಲಿ ಹೋಗಿ ಬಂದರೆ ಭಾರಿ ವಾಹನಗಳ ಸಂಚಾರವನ್ನು ನೋಡಬಹುದು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಹತ್ತು ಚಕ್ರಗಳ ಬೃಹತ್ ವಾಹನಗಳು ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಿ ರಸ್ತೆಗಳನ್ನು ಹಾಳುಗೆಡಹುತ್ತಿದೆ. ಇದರಿಂದ ಕೊಡಗು ಜಿಲ್ಲೆಯ ರಸ್ತೆಗಳು ಪದೇ ಪದೇ ದುರಾವಸ್ಥೆಗೆ ಒಳಗಾಗುತ್ತಿವೆ. ಜನಪ್ರತಿನಿಧಿಗಳೂ ಇದರತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.</p>.<p>‘ಟಿಂಬರ್ ಮಾಫಿಯಾ’ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ವಾಹನಗಳ ಮೇಲೆ ನಿಗದಿಪಡಿಸಿದಕ್ಕಿಂತಲೂ ಹೆಚ್ಚು ಭಾರ ಹಾಕಿ ಸಾಗಾಣಿಕೆ ಮಾಡಲಾಗುತ್ತಿದೆ. ಭಾರಿ ಗಾತ್ರದ ವಾಹನಗಳು ಕಿರಿದಾದ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನ ಸವಾರರು ಜೀವ ಕೈಲಿಡಿದು ವಾಹನ ಚಾಲನೆ ಮಾಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಇಂತಹ ವಾಹನಗಳ ಸಂಚಾರದಿಂದಾಗಿ ಬಿಳಿಗೇರಿ ಗ್ರಾಮದ ರಸ್ತೆಯು ಹಾಳಾಗುತ್ತಿದೆ. ಗುಂಡಿಗಳು ನಿರ್ಮಾಣವಾಗುತ್ತಿವೆ. ಸರ್ಕಾರ ರಸ್ತೆ ದುರಸ್ತಿ ಮಾಡಿಸಿರುವುದು, ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ನಿರ್ಮಾಣ ಚಟುವಟಿಕೆಗಳನ್ನೂ ಮಳೆಗಾಲದಲ್ಲಿ ತಡೆಯಬೇಕು. ಜೆಸಿಬಿಯನ್ನು ಕೇವಲ ತುರ್ತು ಕೆಲಸಗಳಿಗೆ ಮಾತ್ರವೇ ಬಳಸಬೇಕು. ಯಾವುದೇ ಕಾರಣಕ್ಕೂ ತುರ್ತು ಕೆಲಸ ಬಿಟ್ಟು, ಅನ್ಯ ಉದ್ದೇಶಗಳಿಗೆ ಮಳೆಗಾಲ ಸಂದರ್ಭದಲ್ಲಿ ಬಳಸಲೇಬಾರದು ಎಂದು ಆಗ್ರಹಿಸಿದರು.</p>.<p>ಬೆಳೆಗಾರರಾದ ತುಂತಜೆ ತಿಮ್ಮಯ್ಯ, ಪರ್ಲಕೋಟಿ ಮಾಚಯ್ಯ, ಕೋಟೇರ ಶರಿ ಮುದ್ದಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಮಳೆಗಾಲ ಮುಗಿಯುವವರೆಗೂ ಕಟ್ಟುನಿಟ್ಟಾಗಿ ತಡೆದು, ಗ್ರಾಮೀಣ ರಸ್ತೆಗಳನ್ನು ರಕ್ಷಿಸಬೇಕು ಎಂದು ಬೆಳೆಗಾರರಾದ ಬಿಳಿಗೇರಿ ಗ್ರಾಮದ ಮಂಞ್ಙೀರ ಉಮೇಶ್ ಅಪ್ಪಣ್ಣ ಒತ್ತಾಯಿಸಿದರು.</p>.<p>ಜಿಲ್ಲಾಧಿಕಾರಿ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದರೆ, ಅದು ಇನ್ನೂ ಜಾರಿಯಾಗಿಲ್ಲ. ಒಮ್ಮೆ ಜಿಲ್ಲೆಯ ಗ್ರಾಮೀಣ ರಸ್ತೆಗಳಲ್ಲಿ ಹೋಗಿ ಬಂದರೆ ಭಾರಿ ವಾಹನಗಳ ಸಂಚಾರವನ್ನು ನೋಡಬಹುದು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಹತ್ತು ಚಕ್ರಗಳ ಬೃಹತ್ ವಾಹನಗಳು ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಿ ರಸ್ತೆಗಳನ್ನು ಹಾಳುಗೆಡಹುತ್ತಿದೆ. ಇದರಿಂದ ಕೊಡಗು ಜಿಲ್ಲೆಯ ರಸ್ತೆಗಳು ಪದೇ ಪದೇ ದುರಾವಸ್ಥೆಗೆ ಒಳಗಾಗುತ್ತಿವೆ. ಜನಪ್ರತಿನಿಧಿಗಳೂ ಇದರತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.</p>.<p>‘ಟಿಂಬರ್ ಮಾಫಿಯಾ’ ಜಿಲ್ಲೆಯಲ್ಲಿ ಸಕ್ರಿಯವಾಗಿದೆ. ವಾಹನಗಳ ಮೇಲೆ ನಿಗದಿಪಡಿಸಿದಕ್ಕಿಂತಲೂ ಹೆಚ್ಚು ಭಾರ ಹಾಕಿ ಸಾಗಾಣಿಕೆ ಮಾಡಲಾಗುತ್ತಿದೆ. ಭಾರಿ ಗಾತ್ರದ ವಾಹನಗಳು ಕಿರಿದಾದ ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನ ಸವಾರರು ಜೀವ ಕೈಲಿಡಿದು ವಾಹನ ಚಾಲನೆ ಮಾಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.</p>.<p>ಇಂತಹ ವಾಹನಗಳ ಸಂಚಾರದಿಂದಾಗಿ ಬಿಳಿಗೇರಿ ಗ್ರಾಮದ ರಸ್ತೆಯು ಹಾಳಾಗುತ್ತಿದೆ. ಗುಂಡಿಗಳು ನಿರ್ಮಾಣವಾಗುತ್ತಿವೆ. ಸರ್ಕಾರ ರಸ್ತೆ ದುರಸ್ತಿ ಮಾಡಿಸಿರುವುದು, ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ನಿರ್ಮಾಣ ಚಟುವಟಿಕೆಗಳನ್ನೂ ಮಳೆಗಾಲದಲ್ಲಿ ತಡೆಯಬೇಕು. ಜೆಸಿಬಿಯನ್ನು ಕೇವಲ ತುರ್ತು ಕೆಲಸಗಳಿಗೆ ಮಾತ್ರವೇ ಬಳಸಬೇಕು. ಯಾವುದೇ ಕಾರಣಕ್ಕೂ ತುರ್ತು ಕೆಲಸ ಬಿಟ್ಟು, ಅನ್ಯ ಉದ್ದೇಶಗಳಿಗೆ ಮಳೆಗಾಲ ಸಂದರ್ಭದಲ್ಲಿ ಬಳಸಲೇಬಾರದು ಎಂದು ಆಗ್ರಹಿಸಿದರು.</p>.<p>ಬೆಳೆಗಾರರಾದ ತುಂತಜೆ ತಿಮ್ಮಯ್ಯ, ಪರ್ಲಕೋಟಿ ಮಾಚಯ್ಯ, ಕೋಟೇರ ಶರಿ ಮುದ್ದಪ್ಪ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>