ತಂತ್ರಜ್ಞಾನ ಮನುಷ್ಯ ಸಂಬಂಧಗಳನ್ನು ಕತ್ತರಿಸುವ ಕತ್ತರಿ ಯಾಗಬಾರದು, ಬದಲಿಗೆ ಹೊಲಿದು ಸೇರಿಸುವ ಸೂಜಿಯಾಗಬೇಕು ಎಂದ ರೇಖಾ ಅವರು, ‘ವಾಟ್ಸ್ಆ್ಯಪ್ನಲ್ಲಿ ಅನಾವಶ್ಯಕ ಸಂದೇಶಗಳನ್ನು ಹಾಕುವುದು, ಮನೆಯೊಳಗಿನ ಗಂಡ- ಹೆಂಡತಿಯ ನಡುವಿನ ಖಾಸಗಿ ಸಂಬಂಧದಿಂದ ಆರಂಭಿಸಿ ಜಾತಿ- ಜಾತಿಗಳ ನಡುವೆ, ಧರ್ಮ- ಧರ್ಮಗಳೊಳಗೆ, ಪಕ್ಷ- ಪಕ್ಷಗಳ ನಡುವೆ ದ್ವೇಷ, ಅಸೂಯೆ, ಅಪನಂಬಿಕೆಗಳನ್ನು ಸೃಷ್ಟಿಸಲು ಇವು ಕಾರಣವಾಗುತ್ತಿವೆ’ ಎಂಬ ಅತಂಕ ವ್ಯಕ್ತಪಡಿಸಿದರು.