ಆಗಸ್ಟ್ ಮೊದಲ ವಾರ ಹಾಗೂ ಸೆಪ್ಟೆಂಬರ್ ಮಧ್ಯದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಕಾಫಿ, ಶುಂಠಿ, ಕಾಳುಮೆಣಸು, ಕಿತ್ತಳೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಜಿಲ್ಲೆಯ ಉತ್ತರ ಭಾಗದಲ್ಲೂ ಬೆಳೆಯುವ ಬೆಳೆಗಳೂ ಹವಾಮಾನ ವೈಪರೀತ್ಯದಿಂದ ಇಳುವರಿ ಕುಸಿದಿದೆ. ಕೊಳೆರೋಗ ತಗುಲಿದೆ. ಕೇಂದ್ರ ತಂಡವು ಇತ್ತೀಚೆಗೆ ಜಿಲ್ಲೆಯ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ತೆರಳಿದೆ. ಈ ವರ್ಷವಾದರೂ ಕೇಂದ್ರದಿಂದ ದೊಡ್ಡಮೊತ್ತದ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಕಾಫಿ ನಾಡಿನ ರೈತರಿದ್ದಾರೆ.