ಮಡಿಕೇರಿ: ಗ್ರಾಮ ಪಂಚಾಯಿತಿ ಸದಸ್ಯನೇ ವ್ಯಕ್ತಿಯೊಬ್ಬನ ಮೇಲೆ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೊಲೆಯಾದ ವ್ಯಕ್ತಿ ತಿಲಕ್ ರಾಜ್(40) ಬಿಜೆಪಿ ಕಾರ್ಯಕರ್ತ. ಆರೋಪಿ ಎಂ. ನಂದ ಜೆಡಿಎಸ್ ಕಾರ್ಯಕರ್ತ.
ತಾಲ್ಲೂಕಿನ ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಎಂ. ನಂದ ಗುಂಡು ಹಾರಿಸಿದ್ದು ಆತ ನಾಪತ್ತೆಯಾಗಿದ್ದಾನೆ. ರಾಜಕೀಯ ವೈಷಮ್ಯದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.