ಗುರುವಾರ, 26 ಫೆಬ್ರುವರಿ 2026
×
ADVERTISEMENT

ಕಾಯ್ದೆಯಲ್ಲಿಲ್ಲ ಸೋರಿಕೆಗೆ ಅವಕಾಶ: ವಿಬಿ–ಜಿ ರಾಮ್‌ ಜಿ ಸಮರ್ಥಿಸಿದ ಪ್ರತಾಪ್‌ಸಿಂಹ

Published : 9 ಜನವರಿ 2026, 5:27 IST
Last Updated : 9 ಜನವರಿ 2026, 5:27 IST
ADVERTISEMENT
ಫಾಲೋ ಮಾಡಿ
Comments
ಯೋಜನೆಯ ಉದ್ದೇಶ ಕುರಿತು ಹೆಸರು
‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ನರೇಗಾ) ಕಾಯ್ದೆಯ ಹೆಸರನ್ನು ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ ಗ್ರಾಮೀಣ’ (ವಿಬಿ– ಜಿ ರಾಮ್‌ ಜಿ) ಹೆಸರಾಗಿ ಬದಲಾಯಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರತಾಪಸಿಂಹ ‘ಬಿಜೆಪಿ ಯೋಜನೆಯ ಉದ್ದೇಶಕ್ಕೆ ಅನುಗುಣವಾಗಿ ಹೆಸರು ಇಡುತ್ತದೆಯೇ ಹೊರತು ವ್ಯಕ್ತಿಗತವಾಗಿ ಹೆಸರಿಡುವುದಿಲ್ಲ’ ಎಂದರು. ‘ಮಹಾತ್ಮ ಗಾಂಧೀಜಿ ಕುರಿತು ನಮಗೆ ಗೌರವ ಇದೆ. ನೋಟಿನಲ್ಲಿ ಅವರ ಚಿತ್ರ ಇದೆ. ಅವರಿಗೆ ಕೊಡಬೇಕಾಗಿರುವ ಎಲ್ಲ ಗೌರವಗಳನ್ನೂ ಕೊಟ್ಟಿದ್ದೇವೆ’ ಎಂದರು.
ನಾನು ಆಕಾಂಕ್ಷಿ ಎನ್ನುವುದು ಸುಶಿಕ್ಷಿತರಿಗೆ ಅರ್ಥವಾಗಿದೆ
‘ನಾನು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಎನ್ನುವುದು ಆ ಕ್ಷೇತ್ರದ ವಿದ್ಯಾವಂತರಿಗೆ ಅರಿವಾಗಿದೆ’ ಎಂದು ಬಿಜೆಪಿ ಮುಖಂಡ ಪ್ರತಾಪಸಿಂಹ ತಿಳಿಸಿದರು. ನಾಗೇಂದ್ರ ಅವರು ಚಾಮರಾಜ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಾಪಸಿಂಹ ‘ನಾನೊಬ್ಬ ಆಕಾಂಕ್ಷಿಯೇ ಹೊರತು ಇನ್ನೂ ಅಭ್ಯರ್ಥಿಯಾಗಿಲ್ಲ ಎಂಬುದು ವಿದ್ಯಾವಂತರಿಗೆಲ್ಲ ಅರ್ಥವಾಗುತ್ತದೆ’ ಎಂದು ಹೇಳಿದರು. ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸುಶಿಕ್ಷತರು ಹೆಚ್ಚಿದ್ದಾರೆ. ಹಾಗಾಗಿ ಅಲ್ಲಿ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದೇನೆ. ಬಿಜೆಪಿಯ ಯಾರಿಗೆಲ್ಲ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕೊಟ್ಟಿಲ್ಲವೋ ಅವರನ್ನೆಲ್ಲ ರಾಜ್ಯ ಕಾರಣದಲ್ಲಿ ತೊಡಗಿಸಿಕೊಂಡಿದೆ. ನಾನೂ ಸಹ ರಾಜ್ಯ ರಾಜಕಾರಣದಲ್ಲಿ ಸಕ್ರಿಯನಾಗಿರುವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ದೃಷ್ಟಿಯಿಂದಲೇ ದೇವರಾಜ ಅರಸು ಅವರಿಗೆ ಸರಿಸಮ ಆಗಲಾರರು. ಈ ಕುರಿತು ಚರ್ಚೆಯೇ ಅನಗತ್ಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರುram

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT