ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದವರು ಪ್ರಸ್ತುತಪಡಿಸಿದ ‘ಸಂಗೀತ ನೃತ್ಯ ವೈವಿಧ್ಯ’ವು ನೋಡುಗರನ್ನು ಬಹುವಾಗಿ ಸೆಳೆಯಿತು. ಮಡಿಕೇರಿಯ ಡ್ಯಾನ್ಸ್ ಲ್ಯಾಬ್ ಅಂಡ್ ಫಿಟ್ನೆಸ್ ಸ್ಟುಡಿಯೊ ಹಾಗೂ ಆವಂದೂರಿನ ಇಂಚರಾ ಕಲಾ ತಂಡದವರ ‘ನೃತ್ಯ’, ಕುಶಾಲನಗರದ ಸಂವೇದಿತಾ ಅವರ ಗೀತಗಾಯನ, ಕೊಡಗು ಪತ್ರಕರ್ತರ ಸಂಘದ ‘ಗಾನ ವೈವಿಧ್ಯ’, ಕೂರ್ಗ್ ಹನಿ ಮೆಲೊಡಿಸ್ ತಾತಂಡ ಪ್ರತಾಪ್ ಬೆಳ್ಯಪ್ಪ ಮತ್ತು ಸಂಗಡಿಗರ ‘ಸಂಗೀತ ರಸಮಂಜರಿ’ಗಳು ಸಭಿಕರನ್ನು ಸೂಜಿಗಲ್ಲಿನಂತೆ ಸೆಳದವು.