ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲು ಜಾರಿ ಕೆರೆಗೆ ಬಿದ್ದು ಕಾರ್ಮಿಕ ಸಾವು

Last Updated 5 ಏಪ್ರಿಲ್ 2019, 13:03 IST
ಅಕ್ಷರ ಗಾತ್ರ

ಸುಂಟಿಕೊಪ್ಪ:ಸಮೀಪದ ಕೆದಕಲ್ ಬಳಿಯ ಮೋದೂರಿನಲ್ಲಿ ಗುರುವಾರ ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾರ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.

ಮೋದೂರು ಮಂಜುನಾಥ ತೋಟದ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಕಾರ್ಮಿಕ ಮುತ್ತಣ್ಣ (40) ಮೃತಪಟ್ಟವರು.

ಮುತ್ತಣ್ಣ ಅವರು ತೋಟದ ಕೆರೆಗೆ ಬಟ್ಟೆ ಒಗೆಯಲೆಂದು ಹೋಗಿದ್ದ ಅವರು ಸಂಜೆಯಾದರೂ ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಿದ್ದಾರೆ. ಶುಕ್ರವಾರ ಕೆರೆಬದಿಯಲ್ಲಿ ಬಟ್ಟೆಗಳನ್ನು ನೋಡಿ ಕೆರೆಯಲ್ಲಿ ಬಿದ್ದಿರಬಹುದು ಎಂದು ಶಂಕಿಸಿದ್ದಾರೆ.

ಮಾಹಿತಿಯಂತೆ ಅಲ್ಲಿಗೆ ಬಂದ ಮಡಿಕೇರಿ ಅಗ್ನಿಶಾಮಕ ದಳದ ಲೀಡಿಂಗ್ ಫೈರ್ ಮ್ಯಾನ್ ಸತೀಶ್, ಸಿಬ್ಬಂದಿ ಎಂ.ಎಂ.ನಂಜಪ್ಪ, ಎನ್.ಸಿ.ಭರತ್ ಚಾಲಕ ಪ್ರಕಾಶ್ ಕೆರೆಗೆ ’ಪಾತಾಳ ಗಾಳ’ ಹಾಕಿ ಮೃತದೇಹವನ್ನು ಹೊರ ತೆಗೆದಿದರು.

ಮುತ್ತಣ್ಣ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT