ಕಾಫಿ ಬೆಳೆಗಾರ ಪಟ್ಟಚೆರವಂಡ ವಾಸು ಸುಬ್ಬಯ್ಯ ಅವರ ಕಾಫಿ ತೋಟದ ನಡುವೆ ಕೃಷಿಗಾಗಿ ತೆರೆದಿದ್ದ ಕೆರೆಯಲ್ಲಿ ಸಿಲುಕಿದ್ದ ಕಾಡಾನೆಗಳು, ಗುರುವಾರ ಬೆಳಕು ಹರಿಯುತ್ತಿದ್ದಂತೆಯೇ ಘೀಳಿಡಲು ಆರಂಭಿಸಿದ್ದವು. ‘ರಕ್ಷಿಸಿ...‘ ಎಂದು ಮೊರೆಯಿಟ್ಟವು.ಬುಧವಾರ ತಡರಾತ್ರಿಯೇ ಹಿಂಡಾಗಿ ಬಂದಿದ್ದ ಕಾಡಾನೆಗಳಲ್ಲಿ ಎರಡು ಮರಿಯಾನೆ, ಒಂದು ದೊಡ್ಡ ಆನೆ ನೀರಿನಲ್ಲಿ ಸಿಲುಕಿಕೊಂಡಿದ್ದವು. ಅವುಗಳಿಗೆ ಮೇಲೆ ಬರಲು ಸಾಧ್ಯವಾಗಿರಲಿಲ್ಲ.