‘ಸರ್ಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಇಂತಹ ಸಂಕಷ್ಟದ ವೇಳೆ ಸಂಘ–ಸಂಸ್ಥೆಗಳೂ ನೆರವಾಗಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಾಯಿ ಇದ್ದಂತೆ. ಸದಸ್ಯರೆಲ್ಲರೂ ಮಕ್ಕಳು. ಈ ಯೋಜನೆಯ ಮೂಲಕ ಸದಸ್ಯರಲ್ಲಿ ಆತ್ಮವಿಶ್ವಾಸ, ಉಳಿತಾಯ ಮನೋಭಾವ, ಬಂಡವಾಳ ಹೂಡಿಕೆ, ಜೀವನ ಭದ್ರತೆಯ ಅರಿವು ಮೂಡಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.