ತಂಡಕ್ಕೆ ಬಹುಮಾನ:ಕಾರ್ಯಾಚರಣೆಯಲ್ಲಿ ಡಿಸಿಐಬಿಯ ಇನ್ಸ್ಪೆಕ್ಟರ್ ಎಂ. ಮಹೇಶ್, ನಾಪೋಕ್ಲು ಪೊಲೀಸ್ ಠಾಣೆಯ ಪಿಸ್ಐ ಎಂ. ನಂಜುಂಡಸ್ವಾಮಿ, ಸಿಬ್ಬಂದಿ ಕೆ.ವೈ.ಹಮೀದ್, ಎಂ.ಎನ್.ನಿರಂಜನ್, ಬಿ.ಎಲ್.ಯೋಗೇಶ್ ಕುಮಾರ್, ವಿ.ಜಿ.ವೆಂಕಟೇಶ್, ಕೆ.ಆರ್.ವಸಂತ, ಗ್ರಾಮಾಂತರ ಠಾಣೆಯ ಶಿವರಾಮೇಗೌಡ, ದಿನೇಶ್, ಅವಿನಾಶ್, ರಾಜೇಶ್, ಗಿರೀಶ್, ಶಶಿಕುಮಾರ್ ಪಾಲ್ಗೊಂಡಿದ್ದರು. ಈ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
ಮಾಹಿತಿ ನೀಡಿ: ಜಿಲ್ಲೆಯಲ್ಲಿ ಗಾಂಜಾ ಮಾರಾಟ ಜಾಲ ಕಾರ್ಯಾಚರಿಸುತ್ತಿದೆ. ಗಾಂಜಾ ಅಥವಾ ಮಾದಕ ವಸ್ತುಗಳ ಮಾರಾಟ ಕಂಡುಬಂದರೆ ಗಸ್ತು ಪೊಲೀಸರಿಗೆ ಮಾಹಿತಿ ನೀಡಬಹುದು. ಅಲ್ಲದೇ, ಜಿಲ್ಲೆಯ 30 ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆ ಇಟ್ಟಿದ್ದು ಅಕ್ರಮಗಳ ಬಗ್ಗೆ ಮಾಹಿತಿ ನೀಡಬಹುದು. ಆ ಪತ್ರದಲ್ಲಿ ತಮ್ಮ ವಿಳಾಸ, ಹೆಸರು ಬರೆಯುವ ಅಗತ್ಯವಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.