<p><strong>ಗೋಣಿಕೊಪ್ಪಲು</strong>: ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಮುಂಜಾನೆಯಿಂದಲೇ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯ ಜನ ಬಂದರು.</p>.<p>ಬೆಳಿಗ್ಗೆ 6 ಗಂಟೆಯಿಂದಲೇ ಬೈಕ್, ಕಾರು ಮೊದಲಾದ ವಾಹನಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಲುಗಟ್ಟಿ ನಿಂತವು. ಬೆಳಿಗ್ಗೆ 9 ಗಂಟೆ ವೇಳೆಗೆ ಪಟ್ಟಣದ ಯಾವ ರಸ್ತೆ ನೋಡಿದರೂ ವಾಹನಗಳೇ ತುಂಬಿ ತುಳಿಕಿದವು.</p>.<p>ಮುಖ್ಯ ರಸ್ತೆ, ಬೈಪಾಸ್ ರಸ್ತೆಯಲ್ಲಿ ನಡೆದಾಡುವುದಕ್ಕೆ ಜಾಗವಿರಲಿಲ್ಲ. ಬೈಪಾಸ್ ರಸ್ತೆಯ ಪೊನ್ನಂಪೇಟೆ ತಿರುವು, ಪಾಲಿಬೆಟ್ಟ ರಸ್ತೆ ತಿರುವಿನಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದವು.</p>.<p>ಪೊನ್ನಂಪೇಟೆ ತಿರುವಿನಿಂದ ಮೈಸೂರು ರಸ್ತೆ ಸೀಗೆತೋಡುವರೆಗೂ 2 ಕಿಮೀ ದೂರ ವಾಹನಗಳು ನಿಂತಿದ್ದವು. ಈ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಟ್ಟರು.</p>.<p>ಪಟ್ಟಣದ ಬಸ್ ನಿಲ್ದಾಣದ ಬಳಿ ಇದ್ದ ತರಕಾರಿ ಮಾರುಕಟ್ಟೆಯನ್ನು ಒಂದು ಕಿ.ಮೀ ದೂರದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದ ವಾಹನ ಇಲ್ಲದವರು ಹಾಗೂ ಕೂಲಿ ಕಾರ್ಮಿಕರು ತೀವ್ರ ಬವಣೆ ಅನುಭವಿಸಿದರು.</p>.<p>‘ನೂರು ರೂಪಾಯಿ ತರಕಾರಿ ತರಲು ಅಷ್ಟೇ ಹಣವನ್ನು ಆಟೊ ಬಾಡಿಗೆ ಕೊಡಬೇಕಾಗಿದೆ. ತರಕಾರಿ ಅಂಗಡಿಗಳನ್ನು ಎಪಿಎಂಸಿಗೆ ವರ್ಗಾಯಿಸಿರುವುದು ತೀರ ಅವೈಜ್ಞಾನಿಕ ಮತ್ತು ಜನವಿರೋಧಿ ಕ್ರಮವಾಗಿದೆ’ ಎಂದು ಪಟ್ಟಣದ ನಿವಾಸಿ ರಫೀಕ್ ತೂಚಮಕೇರಿ ತೀರ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಎಪಿಎಂಸಿ ಆವರಣಕ್ಕೆ ತರಕಾರಿ ಕೊಂಡೊಯ್ಯಲು ವಾಹನಕ್ಕೆ ₹500 ಬಾಡಿಗೆ ಕೊಡಬೇಕು ಮತ್ತು ವಾಪಸ್ ತರಲು ಅಷ್ಟೇ ಬಾಡಿಗೆ ನೀಡಬೇಕಾಗಿದೆ. ದೂರವಿರುವುದರಿಂದ ಜನರೂ ಬರುತ್ತಿಲ್ಲ, ವ್ಯಾಪಾರವೂ ಆಗುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿಅಸ್ಲಾಂ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು</strong>: ಅಗತ್ಯ ವಸ್ತುಗಳ ಖರೀದಿಗೆ ಶುಕ್ರವಾರ ಮುಂಜಾನೆಯಿಂದಲೇ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯ ಜನ ಬಂದರು.</p>.<p>ಬೆಳಿಗ್ಗೆ 6 ಗಂಟೆಯಿಂದಲೇ ಬೈಕ್, ಕಾರು ಮೊದಲಾದ ವಾಹನಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಲುಗಟ್ಟಿ ನಿಂತವು. ಬೆಳಿಗ್ಗೆ 9 ಗಂಟೆ ವೇಳೆಗೆ ಪಟ್ಟಣದ ಯಾವ ರಸ್ತೆ ನೋಡಿದರೂ ವಾಹನಗಳೇ ತುಂಬಿ ತುಳಿಕಿದವು.</p>.<p>ಮುಖ್ಯ ರಸ್ತೆ, ಬೈಪಾಸ್ ರಸ್ತೆಯಲ್ಲಿ ನಡೆದಾಡುವುದಕ್ಕೆ ಜಾಗವಿರಲಿಲ್ಲ. ಬೈಪಾಸ್ ರಸ್ತೆಯ ಪೊನ್ನಂಪೇಟೆ ತಿರುವು, ಪಾಲಿಬೆಟ್ಟ ರಸ್ತೆ ತಿರುವಿನಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಂತಿದ್ದವು.</p>.<p>ಪೊನ್ನಂಪೇಟೆ ತಿರುವಿನಿಂದ ಮೈಸೂರು ರಸ್ತೆ ಸೀಗೆತೋಡುವರೆಗೂ 2 ಕಿಮೀ ದೂರ ವಾಹನಗಳು ನಿಂತಿದ್ದವು. ಈ ಸಂದರ್ಭದಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಟ್ಟರು.</p>.<p>ಪಟ್ಟಣದ ಬಸ್ ನಿಲ್ದಾಣದ ಬಳಿ ಇದ್ದ ತರಕಾರಿ ಮಾರುಕಟ್ಟೆಯನ್ನು ಒಂದು ಕಿ.ಮೀ ದೂರದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದ ವಾಹನ ಇಲ್ಲದವರು ಹಾಗೂ ಕೂಲಿ ಕಾರ್ಮಿಕರು ತೀವ್ರ ಬವಣೆ ಅನುಭವಿಸಿದರು.</p>.<p>‘ನೂರು ರೂಪಾಯಿ ತರಕಾರಿ ತರಲು ಅಷ್ಟೇ ಹಣವನ್ನು ಆಟೊ ಬಾಡಿಗೆ ಕೊಡಬೇಕಾಗಿದೆ. ತರಕಾರಿ ಅಂಗಡಿಗಳನ್ನು ಎಪಿಎಂಸಿಗೆ ವರ್ಗಾಯಿಸಿರುವುದು ತೀರ ಅವೈಜ್ಞಾನಿಕ ಮತ್ತು ಜನವಿರೋಧಿ ಕ್ರಮವಾಗಿದೆ’ ಎಂದು ಪಟ್ಟಣದ ನಿವಾಸಿ ರಫೀಕ್ ತೂಚಮಕೇರಿ ತೀರ ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಎಪಿಎಂಸಿ ಆವರಣಕ್ಕೆ ತರಕಾರಿ ಕೊಂಡೊಯ್ಯಲು ವಾಹನಕ್ಕೆ ₹500 ಬಾಡಿಗೆ ಕೊಡಬೇಕು ಮತ್ತು ವಾಪಸ್ ತರಲು ಅಷ್ಟೇ ಬಾಡಿಗೆ ನೀಡಬೇಕಾಗಿದೆ. ದೂರವಿರುವುದರಿಂದ ಜನರೂ ಬರುತ್ತಿಲ್ಲ, ವ್ಯಾಪಾರವೂ ಆಗುತ್ತಿಲ್ಲ’ ಎಂದು ತರಕಾರಿ ವ್ಯಾಪಾರಿಅಸ್ಲಾಂ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>