ಕಳೆದ 21 ವರ್ಷಗಳಿಂದ ಇಲ್ಲಿ ಶಿಶುವಿಹಾರ ನಡೆಸುತ್ತಿದ್ದ ಅವರು ಮಕ್ಕಳಿಗೆ ದಸರೆ ರಜೆ ನೀಡಿದ್ದರು. ಅ. 10ರಂದು ಮತ್ತೆ ತರಗತಿಗಳು ಆರಂಭವಾಗುತ್ತವೆ ಎಂದು ತಮ್ಮಲ್ಲಿದ್ದ 28 ಮಕ್ಕಳಿಗೆ ತಿಳಿಸಿದ್ದರು. ರಜೆ ಅವಧಿಯಲ್ಲಿ ಬೆಂಗಳೂರಿನ ತಮ್ಮ ಪುತ್ರಿ ಮನೆಗೆ ತೆರಳಿದ್ದ ವೇಳೆ ಶನಿವಾರ ಮಿದುಳಿನ ಪಾರ್ಶ್ವವಾಯುವಿಗೆ ತುತ್ತಾದರು. ತಕ್ಷಣವೇ ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆ ದಾಖಲಿಸಿದರೂ ಸ್ಪಂದಿಸದ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ನಂತರ, ಅವರ ಕಣ್ಣುಗಳು, ಮೂತ್ರಪಿಂಡಗಳು, ಹೃದಯ, ಲಿವರ್ನ್ನು ದಾನ ಮಾಡಲಾಯಿತು.