ಪಾಡಿಯ ಇಗ್ಗುತ್ತಪ್ಪನೂ ಸೇರಿದಂತೆ ತನ್ನ ಐವರು ಸೋದರರ ನಡುವಿನ ವೈಮನಸ್ಯದಿಂದಾಗಿ ಇಲ್ಲಿಗೆ ಬಂದು ನೆಲೆಯೂರಿದರು ಎನ್ನುವುದು ಪ್ರಚಲಿತದಲ್ಲಿರುವ ಕಥೆಯಾಗಿದೆ. ಕೇರಳದ ವೀರವರ್ಮ, ತಮಿಳುನಾಡಿನ ಪಾಂಡ್ಯ ಅರಸು, ಕೊಡಗಿನ ಲಿಂಗರಾಜ ಮೊದಲಾದವರ ಕಾಲದಲ್ಲಿ ಈ ದೇವಾಲಯ ಮತ್ತಷ್ಟು ಸುಧಾರಣೆ ಕಂಡಿದೆ. ಇಲ್ಲಿರುವ ಶಾಸನದ ಪ್ರಕಾರ ದೇವಾಲಯದ ಪೂರ್ಣ ಆಡಳಿತವನ್ನು ಶ್ರೀ ವೈಷ್ಣವ ಒಕ್ಕೂಟಕ್ಕೆ ನೀಡಿದ ಬಗ್ಗೆ ಹೇಳಲಾಗಿದೆ. ದಾನಿಗಳ ನೆರವಿನಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಇಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ. ಪಾರ್ವತಿ ಪರಮೇಶ್ವರರ ಜೋಡು ನೃತ್ಯಬಲಿ ನಡೆಯುವುದು ಉತ್ಸವದ ವಿಶೇಷತೆ ಎನಿಸಿದೆ.