ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ತುಂತುರು ಹನಿಗಳಿಂದ ಮಳೆ ಆರಂಭಗೊಂಡಿತು. ಆಗ ಗುಡುಗು ಮಿಂಚಿನ ಅರ್ಭಟ ಜೋರಾಗಿತ್ತು. ಲಾಕ್ಡೌನ್ನಿಂದಾಗಿ ಮನೆ ಒಳಗೆ ಬಂದಿಯಾಗಿದ್ದ ಜನರಿಗೆ ಮಳೆಯ ಅರ್ಭಟ ಆತಂಕ ಹುಟ್ಟಿಸಿತ್ತು.ಕೂಡುಮಂಗಳೂರು, ಗುಡ್ಡೆಹೊಸೂರು, ನಂಜರಾಯಪಟ್ಟಣ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ ಗ್ರಾಮಗಳ ಕೆಲಕಾಲ ಮಳೆ ಜೋರಾಗಿ ಸುರಿಯಿತು.