<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಮಳೆ ಅಬ್ಬರಿಸಿದೆ.</p>.<p>ತಲಕಾವೇರಿಯಲ್ಲಿ ಜೋರು ಮಳೆಯಾಗಿದೆ. ಚೇರಂಬಾಣೆ, ಅಪ್ಪಂಗಳ, ಸೋಮವಾರಪೇಟೆಯಲ್ಲೂ ಮಳೆ ಅಬ್ಬರಿಸಿದೆ. ಮಡಿಕೇರಿಯಲ್ಲೂ ಉತ್ತಮ ಮಳೆಯಾಗಿದೆ.</p>.<p class="Briefhead">ಮನೆಗೆ ನುಗ್ಗಿದ ಮಳೆ ನೀರು</p>.<p>ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.</p>.<p>ಕೆಲವು ದಿನಗಳಿಂದ ಮಳೆ ಇಲ್ಲದೆ ಮೇಲಿನ ಭತ್ತದ ಗದ್ದೆಗಳು ಒಣಗಲು ಆರಂಭವಾಗಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ರೈತರು ಹರ್ಷಚಿತ್ತರಾಗಿದ್ದಾರೆ.</p>.<p>ಪಟ್ಟಣದ ರೇಂಜರ್ಸ್ ಬ್ಲಾಕ್ನಲ್ಲಿ ತಡೆಗೋಡೆ ಕುಸಿದ ಪರಿಣಾಮ ಶಶಿಕುಮಾರ್ ಎಂಬುವವರ ಮನೆಯೊಳಗೆ ನೀರು ನುಗ್ಗಿತ್ತು. ನೀರು ಹೊರಚೆಲ್ಲಲುಮನೆಯವರು ಹರಸಾಹಸ ಪಡಬೇಕಾಯಿತು.</p>.<p>ಇದರೊಂದಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಜನತಾ ಕಾಲೊನಿಯಲ್ಲಿ ಚರಂಡಿ ಕಾಮಗಾರಿ ಹಾಗೂ ಗೌಡ ಸಮಾಜಕ್ಕೆ ತೆರಳುವ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದು, ಮಳೆಗೆ ಮಾಡಿದ್ದ ರಸ್ತೆಯೂ ಕೊಚ್ಚಿ ಹೋಗಿದೆ.</p>.<p class="Briefhead"><strong>ವರುಣನ ಆರ್ಭಟ</strong></p>.<p>ಸುಂಟಿಕೊಪ್ಪ: ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ದಿಢೀರನೇ ಮಳೆ ಸುರಿದಿದ್ದರಿಂದ ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.</p>.<p>ಕಳೆದ ಐದಾರು ದಿನಗಳಿಂದ ಇಳಿಮುಖಗೊಂಡಿದ್ದ ಮಳೆ 2ಗಂಟೆ ಸುಮಾರಿಗೆ ಶುರುವಾಗಿ ಒಂದು ಗಂಟೆ ಎಡೆಬಿಡದೇ ಸುರಿಯಿತು.</p>.<p>ಬೆಳಗಿನಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಒಮ್ಮೆಲೇ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿ ಭಾರಿ ಗುಡುಗಿನೊಂದಿಗೆ ಆರ್ಭಟಿಸಿತು. ಶಬ್ದಕ್ಕೆ ಅಂಜಿದ ಜನ ರಸ್ತೆ ಅಕ್ಕಪಕ್ಕದ ಅಂಗಡಿಗಳಲ್ಲಿ ಆಶ್ರಯ ಪಡೆದರು.</p>.<p>ಇಲ್ಲಿನ ಕುರಿ, ಮೀನು ಮಾರುಕಟ್ಟೆಗೆ ತೆರಳುವ ಮೆಟ್ಟಿಲಿನ ಮೂಲಕ ಮುಖ್ಯರಸ್ತೆಯ ನೀರು ರಭಸದಿಂದ ಹರಿದ ಪರಿಣಾಮ ಆ ಮೆಟ್ಟಿನ ಪಕ್ಕದ ಹೋಟೆಲ್, ಅಂಗಡಿ, ಜನತಾ ಕಾಲೊನಿಗೆ ತೆರಳಲು ಜನ ಪರದಾಡಿದರು. ಹೋಬಳಿ ವ್ಯಾಪ್ತಿಯ ಕೆಲವೆಡೆ ಮಾತ್ರ ಉತ್ತಮ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಮಳೆ ಅಬ್ಬರಿಸಿದೆ.</p>.<p>ತಲಕಾವೇರಿಯಲ್ಲಿ ಜೋರು ಮಳೆಯಾಗಿದೆ. ಚೇರಂಬಾಣೆ, ಅಪ್ಪಂಗಳ, ಸೋಮವಾರಪೇಟೆಯಲ್ಲೂ ಮಳೆ ಅಬ್ಬರಿಸಿದೆ. ಮಡಿಕೇರಿಯಲ್ಲೂ ಉತ್ತಮ ಮಳೆಯಾಗಿದೆ.</p>.<p class="Briefhead">ಮನೆಗೆ ನುಗ್ಗಿದ ಮಳೆ ನೀರು</p>.<p>ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು.</p>.<p>ಕೆಲವು ದಿನಗಳಿಂದ ಮಳೆ ಇಲ್ಲದೆ ಮೇಲಿನ ಭತ್ತದ ಗದ್ದೆಗಳು ಒಣಗಲು ಆರಂಭವಾಗಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ರೈತರು ಹರ್ಷಚಿತ್ತರಾಗಿದ್ದಾರೆ.</p>.<p>ಪಟ್ಟಣದ ರೇಂಜರ್ಸ್ ಬ್ಲಾಕ್ನಲ್ಲಿ ತಡೆಗೋಡೆ ಕುಸಿದ ಪರಿಣಾಮ ಶಶಿಕುಮಾರ್ ಎಂಬುವವರ ಮನೆಯೊಳಗೆ ನೀರು ನುಗ್ಗಿತ್ತು. ನೀರು ಹೊರಚೆಲ್ಲಲುಮನೆಯವರು ಹರಸಾಹಸ ಪಡಬೇಕಾಯಿತು.</p>.<p>ಇದರೊಂದಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಜನತಾ ಕಾಲೊನಿಯಲ್ಲಿ ಚರಂಡಿ ಕಾಮಗಾರಿ ಹಾಗೂ ಗೌಡ ಸಮಾಜಕ್ಕೆ ತೆರಳುವ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದು, ಮಳೆಗೆ ಮಾಡಿದ್ದ ರಸ್ತೆಯೂ ಕೊಚ್ಚಿ ಹೋಗಿದೆ.</p>.<p class="Briefhead"><strong>ವರುಣನ ಆರ್ಭಟ</strong></p>.<p>ಸುಂಟಿಕೊಪ್ಪ: ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ದಿಢೀರನೇ ಮಳೆ ಸುರಿದಿದ್ದರಿಂದ ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.</p>.<p>ಕಳೆದ ಐದಾರು ದಿನಗಳಿಂದ ಇಳಿಮುಖಗೊಂಡಿದ್ದ ಮಳೆ 2ಗಂಟೆ ಸುಮಾರಿಗೆ ಶುರುವಾಗಿ ಒಂದು ಗಂಟೆ ಎಡೆಬಿಡದೇ ಸುರಿಯಿತು.</p>.<p>ಬೆಳಗಿನಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಒಮ್ಮೆಲೇ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿ ಭಾರಿ ಗುಡುಗಿನೊಂದಿಗೆ ಆರ್ಭಟಿಸಿತು. ಶಬ್ದಕ್ಕೆ ಅಂಜಿದ ಜನ ರಸ್ತೆ ಅಕ್ಕಪಕ್ಕದ ಅಂಗಡಿಗಳಲ್ಲಿ ಆಶ್ರಯ ಪಡೆದರು.</p>.<p>ಇಲ್ಲಿನ ಕುರಿ, ಮೀನು ಮಾರುಕಟ್ಟೆಗೆ ತೆರಳುವ ಮೆಟ್ಟಿಲಿನ ಮೂಲಕ ಮುಖ್ಯರಸ್ತೆಯ ನೀರು ರಭಸದಿಂದ ಹರಿದ ಪರಿಣಾಮ ಆ ಮೆಟ್ಟಿನ ಪಕ್ಕದ ಹೋಟೆಲ್, ಅಂಗಡಿ, ಜನತಾ ಕಾಲೊನಿಗೆ ತೆರಳಲು ಜನ ಪರದಾಡಿದರು. ಹೋಬಳಿ ವ್ಯಾಪ್ತಿಯ ಕೆಲವೆಡೆ ಮಾತ್ರ ಉತ್ತಮ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>