ಸಾಹಿತಿ ಡಾ.ರಹಮತ್ ತರೀಕೆರೆ ಮಾತನಾಡಿ, ‘ರಾಜಕೀಯ, ಚಳವಳಿ, ಚಿಂತನೆ, ವಿಚಾರವಾದ, ಲೇಖಕ ಮೊದಲಾದ ಬಹುಮುಖ ಪ್ರತಿಭೆ ಉಳ್ಳವರಾಗಿದ್ದರು. ಆಳವಾದ ಚಿಂತನೆ, ಪ್ರಭುತ್ವದ ವಿರುದ್ಧದ ಪ್ರತಿರೋಧ ಅವರನ್ನು ಉತ್ತಮ ಲೇಖಕರನ್ನಾಗಿಸಿತು. ಕನ್ನಡ ವಿಚಾರ ಸಾಹಿತ್ಯದಲ್ಲಿ ಸುಬ್ಬಯ್ಯ ಅವರ ವಿಚಾರಧಾರೆ ಕನ್ನಡಿಗರನ್ನು ಬೆರಗುಗೊಳಿಸುತ್ತಿತ್ತು’ ಎಂದು ಬಣ್ಣಿಸಿದರು.