<p><strong>ಕುಶಾಲನಗರ:</strong> ರಾಜ್ಯದ ಪ್ರಥಮ ಹಾಲಿನ ಡೈರಿ ಎಂಬ ಖ್ಯಾತಿಯನ್ನು ಹೊಂದಿರುವ ಕೂಡಿಗೆ ಹಾಲಿನ ಡೈರಿಯಲ್ಲಿನ ಮಾಲಿನ್ಯ ನೀರಿನ ಶುದ್ಧೀಕರಣ ಘಟಕದ ನವೀಕರಣಕ್ಕಾಗಿ ₹ 85 ಲಕ್ಷ ಅನುದಾನ ಮಂಜೂರಾಗಿದೆ.</p>.<p>1987ರಲ್ಲಿ ಕೂಡಿಗೆ ಹಾಲಿನ ಡೈರಿ ಹಾಸನದ ಹಾಲು ಒಕ್ಕೂಟದೊಂದಿಗೆ ವಿಲೀನಗೊಂಡು ಸಾಕಷ್ಟು ಪ್ರಗತಿಯನ್ನು ಕಂಡಿದ್ದು, ಹತ್ತು ವರ್ಷಗಳ ಹಿಂದೆ ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರ ವಿಶೇಷ ಪ್ರಯತ್ನದಿಂದ ₹3 ಕೋಟಿಯಲ್ಲಿ ಕೂಡಿಗೆ ಡೈರಿಯನ್ನು ನವೀಕರಿಸಲಾಯಿತು. ಈ ಡೈರಿಯಲ್ಲಿ ಅತ್ಯಾಧುನಿಕ ಶಿಥಲೀಕರಣ ಕೊಠಡಿಯಲ್ಲಿ ಸುಮಾರು 50 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಹಾಲಿನ ಶೇಖರಣೆ, ಸಂಸ್ಕರಣೆ, ಪ್ಯಾಕೆಟ್, ಮಾರಾಟ ವ್ಯವಸ್ಥೆಯೊಂದಿಗೆ ಗುಣಮಟ್ಟದ ಜೊತೆ ಅತ್ಯುತ್ತಮ ಸೇವೆ ನೀಡುತ್ತಿದೆ.</p>.<p>ಕೂಡಿಗೆ ಡೈರಿ ಪ್ರತಿನಿತ್ಯ 52 ಸಾವಿರ ಲೀಟರ್ ಹಾಲು, 25 ಸಾವಿರ ಲೀಟರ್ ಮೊಸರು ಮತ್ತು ಮಜ್ಜಿಗೆ ಸೇರಿದಂತೆ ಇನ್ನಿತರ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ದಿನಕ್ಕೆ ₹15 ಲಕ್ಷದಂತೆ ತಿಂಗಳಿಗೆ ₹4.5 ಕೋಟಿ ಮತ್ತು ವಾರ್ಷಿಕ ಸುಮಾರು ₹ 50 ಕೋಟಿ ವಹಿವಾಟು ನಡೆಸುತ್ತ ಲಾಭದ ಹಾದಿಯಲ್ಲಿದೆ.</p>.<p>ಡೈರಿಯಲ್ಲಿರುವ ಮಾಲಿನ್ಯ ನೀರು ಶುದ್ಧೀಕರಣ ಘಟಕದ ಆಧುನೀಕರಣಕ್ಕೆ ಹಾಸನ ಒಕ್ಕೂಟ ಮುಂದಾಗಿದ್ದು, ₹85 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಪ್ರತಿನಿತ್ಯ 10 ಸಾವಿರ ಲೀಟರ್ ನೀರನ್ನು ಶುದ್ಧೀಕರಣ ಮಾಡುವ ಯೋಜನೆ ಹೊಂದಲಾಗಿದೆ.</p>.<p>ಡೈರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಿ ಒಂದು ಎಕರೆ ಪ್ರದೇಶದಲ್ಲಿ ಮಾಲಿನ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಯೋಜನೆ ರೂಪುಗೊಂಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಮದ್ರಾಸ್ನ ನುರಿತ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ.</p>.<p>‘ಮುಂದಿನ ಎರಡು ತಿಂಗಳ ನಂತರ ಕಾಮಗಾರಿ ಪ್ರಾರಂಭಗೊಳ್ಳಲಿದೆ’ ಎಂದು ಉಪವ್ಯವಸ್ಥಾಪಕ ಎಚ್.ಎನ್. ನಂದೀಶ್ ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<p>‘ಡಿಫ್ಯೂಷರ್ ಟ್ಯಾಂಕ್, ಕ್ಲಾರಿಫೈಯರ್ ಟ್ಯಾಂಕ್, ವಾಯುನೌಕೆ ಟ್ಯಾಂಕ್, ಅಂತಿಮ ಟ್ಯಾಂಕ್, ಬ್ಲೌವರ್ ರೂಮ್, ಪೂರ್ವಭಾವಿ ಶುದ್ಧೀಕರಣ ಘಟಕ, ಶೋಧನಾ ಟ್ಯಾಂಕ್, ಶೇಖರಣೆ, ಪಂಪ್ ಹೌಸ್ ಸೇರಿದಂತೆ ಇನ್ನಿತರ ಕಾಮಗಾರಿ ನಡೆಯಲಿದೆ. ಈ ಕೇಂದ್ರದಲ್ಲಿ ಶುದ್ಧೀಕರಣವಾದ ನೀರನ್ನು ಶೀಥಲೀಕರಣ ಘಟಕ ಹಾಗೂ ಡೈರಿ ನಿರ್ವಹಣೆಗೆ ಬಳಸಲಾಗುವುದು. ಅಲ್ಲದೇ ಹುಲ್ಲು ಬೆಳೆಸಲು ಹಾಗೂ ಇನ್ನಿತರ ಕೃಷಿ ಚಟುವಟಿಕೆಯಲ್ಲಿ ಬಳಸಲಾಗುವುದು’ ಎಂದು ಘಟಕದ ಮೇಲ್ವಿಚಾರಕ ಕಾಂತರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ:</strong> ರಾಜ್ಯದ ಪ್ರಥಮ ಹಾಲಿನ ಡೈರಿ ಎಂಬ ಖ್ಯಾತಿಯನ್ನು ಹೊಂದಿರುವ ಕೂಡಿಗೆ ಹಾಲಿನ ಡೈರಿಯಲ್ಲಿನ ಮಾಲಿನ್ಯ ನೀರಿನ ಶುದ್ಧೀಕರಣ ಘಟಕದ ನವೀಕರಣಕ್ಕಾಗಿ ₹ 85 ಲಕ್ಷ ಅನುದಾನ ಮಂಜೂರಾಗಿದೆ.</p>.<p>1987ರಲ್ಲಿ ಕೂಡಿಗೆ ಹಾಲಿನ ಡೈರಿ ಹಾಸನದ ಹಾಲು ಒಕ್ಕೂಟದೊಂದಿಗೆ ವಿಲೀನಗೊಂಡು ಸಾಕಷ್ಟು ಪ್ರಗತಿಯನ್ನು ಕಂಡಿದ್ದು, ಹತ್ತು ವರ್ಷಗಳ ಹಿಂದೆ ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರ ವಿಶೇಷ ಪ್ರಯತ್ನದಿಂದ ₹3 ಕೋಟಿಯಲ್ಲಿ ಕೂಡಿಗೆ ಡೈರಿಯನ್ನು ನವೀಕರಿಸಲಾಯಿತು. ಈ ಡೈರಿಯಲ್ಲಿ ಅತ್ಯಾಧುನಿಕ ಶಿಥಲೀಕರಣ ಕೊಠಡಿಯಲ್ಲಿ ಸುಮಾರು 50 ಸಾವಿರ ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದೆ. ಹಾಲಿನ ಶೇಖರಣೆ, ಸಂಸ್ಕರಣೆ, ಪ್ಯಾಕೆಟ್, ಮಾರಾಟ ವ್ಯವಸ್ಥೆಯೊಂದಿಗೆ ಗುಣಮಟ್ಟದ ಜೊತೆ ಅತ್ಯುತ್ತಮ ಸೇವೆ ನೀಡುತ್ತಿದೆ.</p>.<p>ಕೂಡಿಗೆ ಡೈರಿ ಪ್ರತಿನಿತ್ಯ 52 ಸಾವಿರ ಲೀಟರ್ ಹಾಲು, 25 ಸಾವಿರ ಲೀಟರ್ ಮೊಸರು ಮತ್ತು ಮಜ್ಜಿಗೆ ಸೇರಿದಂತೆ ಇನ್ನಿತರ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ದಿನಕ್ಕೆ ₹15 ಲಕ್ಷದಂತೆ ತಿಂಗಳಿಗೆ ₹4.5 ಕೋಟಿ ಮತ್ತು ವಾರ್ಷಿಕ ಸುಮಾರು ₹ 50 ಕೋಟಿ ವಹಿವಾಟು ನಡೆಸುತ್ತ ಲಾಭದ ಹಾದಿಯಲ್ಲಿದೆ.</p>.<p>ಡೈರಿಯಲ್ಲಿರುವ ಮಾಲಿನ್ಯ ನೀರು ಶುದ್ಧೀಕರಣ ಘಟಕದ ಆಧುನೀಕರಣಕ್ಕೆ ಹಾಸನ ಒಕ್ಕೂಟ ಮುಂದಾಗಿದ್ದು, ₹85 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಪ್ರತಿನಿತ್ಯ 10 ಸಾವಿರ ಲೀಟರ್ ನೀರನ್ನು ಶುದ್ಧೀಕರಣ ಮಾಡುವ ಯೋಜನೆ ಹೊಂದಲಾಗಿದೆ.</p>.<p>ಡೈರಿ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಿ ಒಂದು ಎಕರೆ ಪ್ರದೇಶದಲ್ಲಿ ಮಾಲಿನ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಯೋಜನೆ ರೂಪುಗೊಂಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಮದ್ರಾಸ್ನ ನುರಿತ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ.</p>.<p>‘ಮುಂದಿನ ಎರಡು ತಿಂಗಳ ನಂತರ ಕಾಮಗಾರಿ ಪ್ರಾರಂಭಗೊಳ್ಳಲಿದೆ’ ಎಂದು ಉಪವ್ಯವಸ್ಥಾಪಕ ಎಚ್.ಎನ್. ನಂದೀಶ್ ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<p>‘ಡಿಫ್ಯೂಷರ್ ಟ್ಯಾಂಕ್, ಕ್ಲಾರಿಫೈಯರ್ ಟ್ಯಾಂಕ್, ವಾಯುನೌಕೆ ಟ್ಯಾಂಕ್, ಅಂತಿಮ ಟ್ಯಾಂಕ್, ಬ್ಲೌವರ್ ರೂಮ್, ಪೂರ್ವಭಾವಿ ಶುದ್ಧೀಕರಣ ಘಟಕ, ಶೋಧನಾ ಟ್ಯಾಂಕ್, ಶೇಖರಣೆ, ಪಂಪ್ ಹೌಸ್ ಸೇರಿದಂತೆ ಇನ್ನಿತರ ಕಾಮಗಾರಿ ನಡೆಯಲಿದೆ. ಈ ಕೇಂದ್ರದಲ್ಲಿ ಶುದ್ಧೀಕರಣವಾದ ನೀರನ್ನು ಶೀಥಲೀಕರಣ ಘಟಕ ಹಾಗೂ ಡೈರಿ ನಿರ್ವಹಣೆಗೆ ಬಳಸಲಾಗುವುದು. ಅಲ್ಲದೇ ಹುಲ್ಲು ಬೆಳೆಸಲು ಹಾಗೂ ಇನ್ನಿತರ ಕೃಷಿ ಚಟುವಟಿಕೆಯಲ್ಲಿ ಬಳಸಲಾಗುವುದು’ ಎಂದು ಘಟಕದ ಮೇಲ್ವಿಚಾರಕ ಕಾಂತರಾಜ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>