<p><strong>ಸೋಮವಾರಪೇಟೆ</strong>: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಚೌಡ್ಲು ಗಾಂಧಿನಗರದ ಅಬೂಬಕರ್ ಸಿದ್ದಿಕ್, ಸಿ.ಎಂ.ಮಹಮ್ಮದ್ ರಿಯಾಜ್ ಗಾಯಗೊಂಡವರು.</p>.<p>ಜನತಾ ಕಾಲೊನಿ ನಿವಾಸಿಗಳಾದ ಕರೀಂಬೇಗ್, ಅಜೀಂ ಬೇಗ್, ಕಾನ್ವೆಂಟ್ ಬಾಣೆಯ ಅಜುರುದ್ಧೀನ್ ಬಂಧಿತ ಆರೋಪಿಗಳು.</p>.<p>ಆ.8ರ ಗುರುವಾರ ರಾತ್ರಿ ಬಾರ್ ಒಂದರಲ್ಲಿ ಮದ್ಯ ಸೇವನೆ ಸಂದರ್ಭ ಹಣಕಾಸಿನ ವಿಚಾರದಲ್ಲಿ ಮೂವರು ಆರೋಪಿಗಳು ಮಹಮ್ಮದ್ ರಿಯಾಜ್ ಎಂಬುವವರ ತಲೆಗೆ ಬೀಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ. ತಡೆಯಲು ಹೋದ ಅಬೂಬಕರ್ ಸಿದ್ದಿಕ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಸಂದರ್ಭ ತಪ್ಪಿಸಿಕೊಂಡು ಓಡುತ್ತಿರುವಾಗ ಆರೋಪಿಗಳು ಪಟ್ಟಣ ಪಂಚಾಯಿತಿ ಎದುರು ಅಡ್ಡಗಟ್ಟಿ ಸಿದ್ದಿಕ್ ಬೆನ್ನಿನ ಭಾಗಕ್ಕೆ ಚೂರಿಯಿಂದ ಇರಿಯಲಾಗಿದೆ ಎಂದು ರಿಯಾಜ್ ನೀಡಿದ ದೂರಿನನ್ವಯ ಕೊಲೆಯತ್ನ ಪ್ರಕರಣ ದಾಖಲಾಗಿದೆ.</p>.<p>ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ</strong>: ಹಣಕಾಸಿನ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.</p>.<p>ಚೌಡ್ಲು ಗಾಂಧಿನಗರದ ಅಬೂಬಕರ್ ಸಿದ್ದಿಕ್, ಸಿ.ಎಂ.ಮಹಮ್ಮದ್ ರಿಯಾಜ್ ಗಾಯಗೊಂಡವರು.</p>.<p>ಜನತಾ ಕಾಲೊನಿ ನಿವಾಸಿಗಳಾದ ಕರೀಂಬೇಗ್, ಅಜೀಂ ಬೇಗ್, ಕಾನ್ವೆಂಟ್ ಬಾಣೆಯ ಅಜುರುದ್ಧೀನ್ ಬಂಧಿತ ಆರೋಪಿಗಳು.</p>.<p>ಆ.8ರ ಗುರುವಾರ ರಾತ್ರಿ ಬಾರ್ ಒಂದರಲ್ಲಿ ಮದ್ಯ ಸೇವನೆ ಸಂದರ್ಭ ಹಣಕಾಸಿನ ವಿಚಾರದಲ್ಲಿ ಮೂವರು ಆರೋಪಿಗಳು ಮಹಮ್ಮದ್ ರಿಯಾಜ್ ಎಂಬುವವರ ತಲೆಗೆ ಬೀಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ. ತಡೆಯಲು ಹೋದ ಅಬೂಬಕರ್ ಸಿದ್ದಿಕ್ ಎಂಬುವವರ ಮೇಲೆ ಹಲ್ಲೆ ನಡೆಸಿದ ಸಂದರ್ಭ ತಪ್ಪಿಸಿಕೊಂಡು ಓಡುತ್ತಿರುವಾಗ ಆರೋಪಿಗಳು ಪಟ್ಟಣ ಪಂಚಾಯಿತಿ ಎದುರು ಅಡ್ಡಗಟ್ಟಿ ಸಿದ್ದಿಕ್ ಬೆನ್ನಿನ ಭಾಗಕ್ಕೆ ಚೂರಿಯಿಂದ ಇರಿಯಲಾಗಿದೆ ಎಂದು ರಿಯಾಜ್ ನೀಡಿದ ದೂರಿನನ್ವಯ ಕೊಲೆಯತ್ನ ಪ್ರಕರಣ ದಾಖಲಾಗಿದೆ.</p>.<p>ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>