ಪೊನ್ನಂಪೇಟೆ: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಬಲಿಯಾಗಿವೆ.
ಬೆಸಗೂರು ಗ್ರಾಮದ ಪೊನ್ನಿಮಾಡ ದೊರೆ ಗಣಪತಿ ಅವರ ಕೊಟ್ಟಿಗೆಯಲ್ಲಿ ಶುಕ್ರವಾರ ರಾತ್ರಿ ಹುಲಿ ದಾಳಿ ಮಾಡಿ, ಹಸುವಿನ ಅರ್ಧ ಭಾಗ ತಿಂದು ಹೋಗಿದೆ.
ದೇವನೂರು ಗ್ರಾಮದ ಲಕ್ಷ್ಮೀಕಾಂತ್ ಅವರ ಹಸುವನ್ನು ಶನಿವಾರ ಮುಂಜಾನೆ ಮನೆಯ ಸಮೀಪ ಹುಲಿ ಕೊಂದು ಕಳೇಬರವನ್ನು ಬಿಟ್ಟು ತೆರಳಿದೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಅರಣ್ಯ ಇಲಾಖೆ ಕಾಡುಪ್ರಾಣಿಗಳಿಂದ ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ತಾಲ್ಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಒತ್ತಾಯಿಸಿದ್ದಾರೆ.