ಕುಶಾಲನಗರ: ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಭಾರದ್ವಾಜ್ ಕೆ.ಆನಂಧತೀರ್ಥ ಅಭಿಪ್ರಾಯ ಪಟ್ಟರು.
ಕುಶಾಲನಗರ ಸಮೀಪದ ಕೂಡ್ಲೂರಿನ ಖಾಸಗಿ ರೆಸಾರ್ಟ್ನಲ್ಲಿ `ವಾಯ್ಸ ಆಫ್ ಕೂರ್ಗ್' ಮತ್ತು `ಮಕ್ಕಳ ಹಕ್ಕುಗಳ ಕ್ರಿಯಾ ವೇದಿಕೆ' ವತಿಯಿಂದ ಭಾನುವಾರ ನಡೆದ `ಗಾನ ಲಹರಿ' ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಬಹುಮುಖ ಪ್ರತಿಭೆಗಳನ್ನು ಹೊಂದಿರುತ್ತಾರೆ. ಅವರ ಆ ಪ್ರತಿಭೆಗಳನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ಕೆ.ಕೆ. ಮಂಜುನಾಥ ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು ಎಂದರು.
ಪ್ರಮುಖರಾದ ಲಕ್ಷ್ಮಣ ರಾಜೇಅರಸ್, ಎಚ್.ಎನ್. ಮಂಜುನಾಥ, ಶಿಕ್ಷಕಿ ಮುನುಬಾಯಿ, ಸಂಗೀತ ಶಿಕ್ಷಕಿ ಭಾರತಿ ಮತ್ತಿತರು ಭಾಗವಹಿಸಿದ್ದರು.