<p><strong>ಬಂಗಾರಪೇಟೆ</strong>: ಬಿಸಿಲಿನ ತಾಪ ಏರುತ್ತಿದ್ದಂತೆ ತಾಲ್ಲೂಕಿನ 9 ಪಂಚಾಯಿತಿಗಳಲ್ಲಿ ನೀರಿಗೆ ತತ್ವಾರ ಶುರುವಾಗಿದೆ.</p>.<p>21 ಪಂಚಾಯಿತಿ ಪೈಕಿ ಕಸಾಬ ವ್ಯಾಪ್ತಿಯ 18 ಗ್ರಾಮ, ಬೂದಿಕೋಟೆ ಹೋಬಳಿಯ 7 ಗ್ರಾಮ, ಕಾಮಮಸಮುದ್ರ ಹೋಬಳಿಯ 2 ಗ್ರಾಮ ಸೇರಿದಂತೆ 27 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.</p>.<p>ಬಹುತೇಕ ಗ್ರಾಮಗಳಲ್ಲಿ ರೈತರು ಜೀವನಕ್ಕಾಗಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ನೀರಿನ ಅಭಾವದಿಂದಾಗಿ ರಾಸುಗಳ ಪಾಲನೆ ಮತ್ತಷ್ಟು ಸಮಸ್ಯೆಯಾಗಿದೆ.</p>.<p>ಕಾಮಸಮುದ್ರ ಹೋಬಳಿ ದೋಣಿಮೊಡಗು ಪಂಚಾಯಿತಿಯ ತೆನಿಮೊಡಗು ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸಾಕರಸನಹಳ್ಳಿ ಗ್ರಾಮದಲ್ಲಿ 8 ತಿಂಗಳ ಹಿಂದೆಯೇ ಕೊಳವೆ ಬಾವಿ ಬತ್ತಿಹೋಗಿದೆ. ಐದಾರು ತಿಂಗಳಿಂದ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<p>ಆಲಂಬಾಡಿ ಜೋತೇನಹಳ್ಳಿ ಪಂಚಾಯಿತಿಯ ಗಾಜಗ ಗ್ರಾಮದಲ್ಲಿ ಮೂರು ತಿಂಗಳಿಂದ ನೀರಿನ ಅಭಾವ ಉಂಟಾಗಿದೆ. ಪ್ರಸ್ತುತ ನಿತ್ಯ 5 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ಪಂಚಾಯಿತಿಯ ಹಿರೇಕರಪನಹಳ್ಳಿಗೆ ಟ್ಯಾಂಕರ್ ಮೂಲಕ, ಕೊಮ್ಮೇನಹಳ್ಳಿ ನೆತ್ತಬೆಲೆ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ.</p>.<p>ಯಳೇಸಂದ್ರ ಪಂಚಾಯಿತಿಯ ಗರುಡಕೆಂಪನಹಳ್ಳಿ, ಅಂಬೇಡ್ಕರ್ ಕಾಲೋನಿ, ಕೋಡಗುರ್ಕಿ ದಿನ್ನಕೊತ್ತೂರು ಗ್ರಾಮಗಳಲ್ಲಿ ಇದ್ದ ಕೊಳವೆ ಬಾವಿಗಳು ಬತ್ತಿವೆ. ಸುಮಾರು ಒಂದೂವರೆ ತಿಂಗಳಿಂದ ಈ ಗ್ರಾಮಗಳಲ್ಲಿ ನೀರಿಗೆ ಅಭಾವವಿದ್ದು, ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಕೆಗೆ ಪಂಚಾಯಿತಿ ಕ್ರಮ ಕೈಗೊಂಡಿದೆ.</p>.<p>ತಾಲ್ಲೂಕಿನ 9 ಹಳ್ಳಿಗಳಿಗೆ ನಿತ್ಯ 26 ಟ್ಯಾಂಕರ್, 19 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಟ್ಯಾಂಕರ್ಗೆ ₹ 600, ಖಾಸಗಿ ಕೊಳವೆ ಬಾವಿಗೆ ತಿಂಗಳಿಗೆ ₹ 18 ಸಾವಿರ ಪಾವತಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್<br />ತಿಳಿಸಿದರು.</p>.<p>*</p>.<p><strong>13 ದಿನವಾದರೂ ನೀರಿಲ್ಲ</strong></p>.<p>ಬಂಗಾರಪೇಟೆ ಪಟ್ಟಣದಲ್ಲಿಯೂ ನೀರಿನ ಬವಣೆ ಹೆಚ್ಚಿದೆ. ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದ್ದ ಬಡಾವಣೆಗಳಲ್ಲಿ ಈಗ 13 ದಿನವಾದರೂ ನೀರಿಲ್ಲ. ಕೆಲವೆಡೆ 20 ದಿನಗಳಾದರೂ ನೀರು ಬಿಟ್ಟಿಲ್ಲ ಎನ್ನುವುದು ನಿವಾಸಿಗಳ ದೂರು.</p>.<p>27 ಬಡಾವಣೆಗಳ ಪೈಕಿ ದೇಶಹಳ್ಳಿ, ವಿಜಯನಗರ, ವಿವೇಕಾನಂದ ನಗರ ಸೇರಿದಂತೆ 8 ಬಡಾವಣೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಉಳ್ಳವರು ಟ್ಯಾಂಕರ್ ನೀರು ಖರೀದಿಸಿದರೆ, ಇಲ್ಲದವರು ಪುರಸಭೆ ನೀರಿಗೆ ಕಾಯುವ ಅನಿವಾರ್ಯ ಎದುರಾಗಿದೆ.</p>.<p>140 ಕೊಳವೆ ಬಾವಿ ಕೊರೆಸಿದ್ದು, ಪ್ರಸ್ತುತ 50ರಲ್ಲಿ ನೀರು ಪೂರೈಕೆ ಆಗುತ್ತಿದೆ. ಅದರಲ್ಲೂ ನೀರಿನ ಹರಿವು ಕ್ಷೀಣಿಸಿದೆ. ಹಾಗಾಗಿ 12 ಟ್ಯಾಂಕರ್ ಮೂಲಕ ನಿತ್ಯ 50 ಟ್ರಿಪ್ ನೀರು ಹೊಡಿಸಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಕಿರಿಯ ಎಂಜಿನಿಯರ್ ರಾಜೇಂದ್ರನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ಬಿಸಿಲಿನ ತಾಪ ಏರುತ್ತಿದ್ದಂತೆ ತಾಲ್ಲೂಕಿನ 9 ಪಂಚಾಯಿತಿಗಳಲ್ಲಿ ನೀರಿಗೆ ತತ್ವಾರ ಶುರುವಾಗಿದೆ.</p>.<p>21 ಪಂಚಾಯಿತಿ ಪೈಕಿ ಕಸಾಬ ವ್ಯಾಪ್ತಿಯ 18 ಗ್ರಾಮ, ಬೂದಿಕೋಟೆ ಹೋಬಳಿಯ 7 ಗ್ರಾಮ, ಕಾಮಮಸಮುದ್ರ ಹೋಬಳಿಯ 2 ಗ್ರಾಮ ಸೇರಿದಂತೆ 27 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.</p>.<p>ಬಹುತೇಕ ಗ್ರಾಮಗಳಲ್ಲಿ ರೈತರು ಜೀವನಕ್ಕಾಗಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ನೀರಿನ ಅಭಾವದಿಂದಾಗಿ ರಾಸುಗಳ ಪಾಲನೆ ಮತ್ತಷ್ಟು ಸಮಸ್ಯೆಯಾಗಿದೆ.</p>.<p>ಕಾಮಸಮುದ್ರ ಹೋಬಳಿ ದೋಣಿಮೊಡಗು ಪಂಚಾಯಿತಿಯ ತೆನಿಮೊಡಗು ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸಾಕರಸನಹಳ್ಳಿ ಗ್ರಾಮದಲ್ಲಿ 8 ತಿಂಗಳ ಹಿಂದೆಯೇ ಕೊಳವೆ ಬಾವಿ ಬತ್ತಿಹೋಗಿದೆ. ಐದಾರು ತಿಂಗಳಿಂದ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<p>ಆಲಂಬಾಡಿ ಜೋತೇನಹಳ್ಳಿ ಪಂಚಾಯಿತಿಯ ಗಾಜಗ ಗ್ರಾಮದಲ್ಲಿ ಮೂರು ತಿಂಗಳಿಂದ ನೀರಿನ ಅಭಾವ ಉಂಟಾಗಿದೆ. ಪ್ರಸ್ತುತ ನಿತ್ಯ 5 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಅದೇ ಪಂಚಾಯಿತಿಯ ಹಿರೇಕರಪನಹಳ್ಳಿಗೆ ಟ್ಯಾಂಕರ್ ಮೂಲಕ, ಕೊಮ್ಮೇನಹಳ್ಳಿ ನೆತ್ತಬೆಲೆ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ.</p>.<p>ಯಳೇಸಂದ್ರ ಪಂಚಾಯಿತಿಯ ಗರುಡಕೆಂಪನಹಳ್ಳಿ, ಅಂಬೇಡ್ಕರ್ ಕಾಲೋನಿ, ಕೋಡಗುರ್ಕಿ ದಿನ್ನಕೊತ್ತೂರು ಗ್ರಾಮಗಳಲ್ಲಿ ಇದ್ದ ಕೊಳವೆ ಬಾವಿಗಳು ಬತ್ತಿವೆ. ಸುಮಾರು ಒಂದೂವರೆ ತಿಂಗಳಿಂದ ಈ ಗ್ರಾಮಗಳಲ್ಲಿ ನೀರಿಗೆ ಅಭಾವವಿದ್ದು, ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಕೆಗೆ ಪಂಚಾಯಿತಿ ಕ್ರಮ ಕೈಗೊಂಡಿದೆ.</p>.<p>ತಾಲ್ಲೂಕಿನ 9 ಹಳ್ಳಿಗಳಿಗೆ ನಿತ್ಯ 26 ಟ್ಯಾಂಕರ್, 19 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಟ್ಯಾಂಕರ್ಗೆ ₹ 600, ಖಾಸಗಿ ಕೊಳವೆ ಬಾವಿಗೆ ತಿಂಗಳಿಗೆ ₹ 18 ಸಾವಿರ ಪಾವತಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಂಜುನಾಥ್<br />ತಿಳಿಸಿದರು.</p>.<p>*</p>.<p><strong>13 ದಿನವಾದರೂ ನೀರಿಲ್ಲ</strong></p>.<p>ಬಂಗಾರಪೇಟೆ ಪಟ್ಟಣದಲ್ಲಿಯೂ ನೀರಿನ ಬವಣೆ ಹೆಚ್ಚಿದೆ. ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದ್ದ ಬಡಾವಣೆಗಳಲ್ಲಿ ಈಗ 13 ದಿನವಾದರೂ ನೀರಿಲ್ಲ. ಕೆಲವೆಡೆ 20 ದಿನಗಳಾದರೂ ನೀರು ಬಿಟ್ಟಿಲ್ಲ ಎನ್ನುವುದು ನಿವಾಸಿಗಳ ದೂರು.</p>.<p>27 ಬಡಾವಣೆಗಳ ಪೈಕಿ ದೇಶಹಳ್ಳಿ, ವಿಜಯನಗರ, ವಿವೇಕಾನಂದ ನಗರ ಸೇರಿದಂತೆ 8 ಬಡಾವಣೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಉಳ್ಳವರು ಟ್ಯಾಂಕರ್ ನೀರು ಖರೀದಿಸಿದರೆ, ಇಲ್ಲದವರು ಪುರಸಭೆ ನೀರಿಗೆ ಕಾಯುವ ಅನಿವಾರ್ಯ ಎದುರಾಗಿದೆ.</p>.<p>140 ಕೊಳವೆ ಬಾವಿ ಕೊರೆಸಿದ್ದು, ಪ್ರಸ್ತುತ 50ರಲ್ಲಿ ನೀರು ಪೂರೈಕೆ ಆಗುತ್ತಿದೆ. ಅದರಲ್ಲೂ ನೀರಿನ ಹರಿವು ಕ್ಷೀಣಿಸಿದೆ. ಹಾಗಾಗಿ 12 ಟ್ಯಾಂಕರ್ ಮೂಲಕ ನಿತ್ಯ 50 ಟ್ರಿಪ್ ನೀರು ಹೊಡಿಸಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಕಿರಿಯ ಎಂಜಿನಿಯರ್ ರಾಜೇಂದ್ರನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>