ಸಂಕ್ರಾಂತಿ ಸಮಯಕ್ಕೆ ಅವರೆ ಕಾಯಿ ಸಿಕ್ಕಿದರೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುತ್ತದೆ. ರೈತರು ಅದರ ನಿರೀಕ್ಷೆಯಲ್ಲಿದ್ದಾರೆ. ಆದರೆ ವಾತಾವರಣ ವೈಪರೀತ್ಯ ಹೂವಿಗೆ ಮುಳುವಾಗಿ ಪರಿಣಮಿಸಿದೆ. ಔಷಧ ಸಿಂಪಡಣೆ ಸಾಧ್ಯವಾಗದ ಪರಿಣಾಮವಾಗಿ ಕಾಯಿಗೆ ಹುಳು ಬಾಧೆ ಹೆಚ್ಚಿದೆ. ಮಾವಿನ ಮರಗಳಿಗೆ ಔಷಧ ಸಿಂಪಡಣೆ ಮಾಡಲು ಈಗ ಸಕಾಲ. ಆದರೆ ಮೋಡ ಮುಸುಕಿದ ವಾತಾವರಣ ಹಾಗೂ ಹನಿಯುವ ಮಳೆ ಅದಕ್ಕೆ ಅವಕಾಶ ನೀಡುತ್ತಿಲ್ಲ.