ರಾಬರ್ಟಸನ್ಪೇಟೆ ನಗರಸಭೆ ಮೇಲೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಎಸಿಬಿಗೆ ಲಿಖಿತ ದೂರುಗಳು ಬಂದಿದ್ದವು. ನಗರಸಭೆಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಾಗಿತ್ತು. ಸದಾ ಕಾಲ ಆಯುಕ್ತರ ಕಚೇರಿಯಲ್ಲಿ ಮಧ್ಯವರ್ತಿಗಳು ತುಂಬಿರುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಅನಾನುಕೂಲ ಉಂಟಾಗಿತ್ತು. ಇ–ಖಾತೆ ಮಾಡಲು ಲಂಚ ಕೇಳುವುದು, ಆಸ್ತಿ ತೆರಿಗೆ ತೋರಿಸುವಲ್ಲಿ ವ್ಯತ್ಯಾಸ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡುವುದು, ವ್ಯಾಪಾರಸ್ಥರಿಗೆ ನೀಡುವ ಲೈಸೆನ್ಸ್ನಲ್ಲಿ ಕೂಡ ಲಂಚ ಪಡೆಯುವ ಬಗ್ಗೆ ದೂರುಗಳು ಇದ್ದವು.