<p><strong>ಕೋಲಾರ:</strong> ‘ಅವಿಭಜಿತ ಜಿಲ್ಲೆಯ ಎಲ್ಲಾ ಪ್ಯಾಕ್ಸ್ಗಳ ಗಣಕೀಕರಣ ಆಧಾರಿತ ಲೆಕ್ಕಪರಿಶೋಧನಾ ವರದಿ ಜುಲೈ ಅಂತ್ಯದೊಳಗೆ ಸಿದ್ಧವಿರಬೇಕು. ವರದಿ ತಡವಾದರೆ ಸಹಿಸುವುದಿಲ್ಲ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ವಿ-ಸಾಫ್ಟ್ ಟೆಕ್ಸಾಲಜೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.</p>.<p>ಪ್ಯಾಕ್ಸ್ಗಳ ಗಣಕೀಕೃತ ಲೆಕ್ಕಪರಿಶೋಧನೆ ಕುರಿತು ಇಲ್ಲಿ ಬುಧವಾರ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಯೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.</p>.<p>‘ಕೋಲಾರ ಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿಯಾಗಿರಬೇಕೆಂಬ ಕಾರಣದಿಂದ ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳ ಗಣಕೀಕರಣದೊಂದಿಗೆ ಆನ್ಲೈನ್ ವಹಿವಾಟಿಗೆ ಒತ್ತು ನೀಡಿದ್ದೆವು. ಆದರೆ, ಸಿಬ್ಬಂದಿ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಪಾರದರ್ಶಕತೆ ಹಾಗೂ ಭ್ರಷ್ಟಾಚಾರರಹಿತ ವಹಿವಾಟು ನಡೆಸುವ ಸದುದ್ದೇಶಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸೊಸೈಟಿಗಳ ಗಣಕೀಕರಣ ಹಾಗೂ ಆನ್ಲೈನ್ ವಹಿವಾಟಿಗೆ ಕ್ರಮ ಕೈಗೊಂಡಿದ್ದೇವೆ. ಆದರೆ, ಈ ಕಾರ್ಯದ ಹೊಣೆ ಹೊತ್ತಿರುವ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ವಿ–ಸಾಫ್ಟ್ ಸಿಬ್ಬಂದಿ, ‘ಲಾಕ್ಡೌನ್ನಿಂದ ದಾಖಲೀಕರಣ ಕಾರ್ಯ ತಡವಾಗಿದೆ’ ಎಂದರು. ಸಿಬ್ಬಂದಿ ಹೇಳಿಕೆ ಒಪ್ಪದ ಅಧ್ಯಕ್ಷರು, ‘ನೀವು ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಲಾಕ್ಡೌನ್ ಅಡ್ಡಿಯೇ? ಕುಂಟು ನೆಪ ಹೇಳುವುದನ್ನು ಬಿಟ್ಟು ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.</p>.<p>‘ಮಾರ್ಚ್ಗೂ ಮುನ್ನವೇ ಸೊಸೈಟಿಗಳ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಲೆಕ್ಕಪರಿಶೋಧನಾ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ವರದಿ ನೀಡಿಲ್ಲ. ಕೆಲಸ ಮಾಡಲು ಇಷ್ಟವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ವಷ್ಟಪಡಿಸಿ. 8 ಮಂದಿ ಸಿಬ್ಬಂದಿಯಿಂದ ಈ ಕಾರ್ಯ ನಿರ್ವಹಿಸಲು ಮುಗಿಸಲು ಅಸಾಧ್ಯ, ಅನುಭವವುಳ್ಳ ಇನ್ನೂ ನಾಲ್ಕೈದು ಸಿಬ್ಬಂದಿ ನೇಮಿಸಿಕೊಳ್ಳಿ. ಕನಿಷ್ಠ 12 ಪ್ಯಾಕ್ಸ್ಗಳಿಗೆ ಒಬ್ಬರು ಸಿಬ್ಬಂದಿ ಇರಬೇಕು’ ಎಂದು ಸಲಹೆ ನೀಡಿದರು.</p>.<p>ಅವಮಾನ: ‘ಹೊಸದಾಗಿ ಕೆಲಸಕ್ಕೆ ತೆಗೆದುಕೊಂಡರೆ ಅವರಿಗೆ ತರಬೇತಿ ನೀಡಬೇಕಾಗುತ್ತದೆ’ ಎಂಬ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿ ಹೇಳಿದರು. ಇದಕ್ಕೆ ಸಿಡಿಮಿಡಿಗೊಂಡ ಅಧ್ಯಕ್ಷರು, ‘ಕೆಲಸ ಮಾಡುವವರನ್ನು ಇಟ್ಟುಕೊಳ್ಳಿ, ಇಲ್ಲವೇ ತೆಗೆದು ಹಾಕಿ. ನೀವು ಉಚಿತವಾಗಿ ಈ ಕೆಲಸ ಮಾಡುತ್ತಿಲ್ಲ. ಗಣಕೀಕೃತ ಲೆಕ್ಕಪರಿಶೋಧನಾ ವರದಿ ಪಡೆಯದಿರುವುದು ಬ್ಯಾಂಕ್ಗೆ ದೊಡ್ಡ ಅವಮಾನ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ಹನುಮಂತರೆಡ್ಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಬೈರೇಗೌಡ, ನಾಗೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ‘ಅವಿಭಜಿತ ಜಿಲ್ಲೆಯ ಎಲ್ಲಾ ಪ್ಯಾಕ್ಸ್ಗಳ ಗಣಕೀಕರಣ ಆಧಾರಿತ ಲೆಕ್ಕಪರಿಶೋಧನಾ ವರದಿ ಜುಲೈ ಅಂತ್ಯದೊಳಗೆ ಸಿದ್ಧವಿರಬೇಕು. ವರದಿ ತಡವಾದರೆ ಸಹಿಸುವುದಿಲ್ಲ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ವಿ-ಸಾಫ್ಟ್ ಟೆಕ್ಸಾಲಜೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.</p>.<p>ಪ್ಯಾಕ್ಸ್ಗಳ ಗಣಕೀಕೃತ ಲೆಕ್ಕಪರಿಶೋಧನೆ ಕುರಿತು ಇಲ್ಲಿ ಬುಧವಾರ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಯೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.</p>.<p>‘ಕೋಲಾರ ಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿಯಾಗಿರಬೇಕೆಂಬ ಕಾರಣದಿಂದ ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳ ಗಣಕೀಕರಣದೊಂದಿಗೆ ಆನ್ಲೈನ್ ವಹಿವಾಟಿಗೆ ಒತ್ತು ನೀಡಿದ್ದೆವು. ಆದರೆ, ಸಿಬ್ಬಂದಿ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>‘ಪಾರದರ್ಶಕತೆ ಹಾಗೂ ಭ್ರಷ್ಟಾಚಾರರಹಿತ ವಹಿವಾಟು ನಡೆಸುವ ಸದುದ್ದೇಶಕ್ಕೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸೊಸೈಟಿಗಳ ಗಣಕೀಕರಣ ಹಾಗೂ ಆನ್ಲೈನ್ ವಹಿವಾಟಿಗೆ ಕ್ರಮ ಕೈಗೊಂಡಿದ್ದೇವೆ. ಆದರೆ, ಈ ಕಾರ್ಯದ ಹೊಣೆ ಹೊತ್ತಿರುವ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ವಿ–ಸಾಫ್ಟ್ ಸಿಬ್ಬಂದಿ, ‘ಲಾಕ್ಡೌನ್ನಿಂದ ದಾಖಲೀಕರಣ ಕಾರ್ಯ ತಡವಾಗಿದೆ’ ಎಂದರು. ಸಿಬ್ಬಂದಿ ಹೇಳಿಕೆ ಒಪ್ಪದ ಅಧ್ಯಕ್ಷರು, ‘ನೀವು ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ಲಾಕ್ಡೌನ್ ಅಡ್ಡಿಯೇ? ಕುಂಟು ನೆಪ ಹೇಳುವುದನ್ನು ಬಿಟ್ಟು ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.</p>.<p>‘ಮಾರ್ಚ್ಗೂ ಮುನ್ನವೇ ಸೊಸೈಟಿಗಳ ಗಣಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ ಲೆಕ್ಕಪರಿಶೋಧನಾ ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ವರದಿ ನೀಡಿಲ್ಲ. ಕೆಲಸ ಮಾಡಲು ಇಷ್ಟವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ವಷ್ಟಪಡಿಸಿ. 8 ಮಂದಿ ಸಿಬ್ಬಂದಿಯಿಂದ ಈ ಕಾರ್ಯ ನಿರ್ವಹಿಸಲು ಮುಗಿಸಲು ಅಸಾಧ್ಯ, ಅನುಭವವುಳ್ಳ ಇನ್ನೂ ನಾಲ್ಕೈದು ಸಿಬ್ಬಂದಿ ನೇಮಿಸಿಕೊಳ್ಳಿ. ಕನಿಷ್ಠ 12 ಪ್ಯಾಕ್ಸ್ಗಳಿಗೆ ಒಬ್ಬರು ಸಿಬ್ಬಂದಿ ಇರಬೇಕು’ ಎಂದು ಸಲಹೆ ನೀಡಿದರು.</p>.<p>ಅವಮಾನ: ‘ಹೊಸದಾಗಿ ಕೆಲಸಕ್ಕೆ ತೆಗೆದುಕೊಂಡರೆ ಅವರಿಗೆ ತರಬೇತಿ ನೀಡಬೇಕಾಗುತ್ತದೆ’ ಎಂಬ ವಿ-ಸಾಫ್ಟ್ ಸಂಸ್ಥೆ ಸಿಬ್ಬಂದಿ ಹೇಳಿದರು. ಇದಕ್ಕೆ ಸಿಡಿಮಿಡಿಗೊಂಡ ಅಧ್ಯಕ್ಷರು, ‘ಕೆಲಸ ಮಾಡುವವರನ್ನು ಇಟ್ಟುಕೊಳ್ಳಿ, ಇಲ್ಲವೇ ತೆಗೆದು ಹಾಕಿ. ನೀವು ಉಚಿತವಾಗಿ ಈ ಕೆಲಸ ಮಾಡುತ್ತಿಲ್ಲ. ಗಣಕೀಕೃತ ಲೆಕ್ಕಪರಿಶೋಧನಾ ವರದಿ ಪಡೆಯದಿರುವುದು ಬ್ಯಾಂಕ್ಗೆ ದೊಡ್ಡ ಅವಮಾನ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ನಿರ್ದೇಶಕರಾದ ನಾಗನಾಳ ಸೋಮಣ್ಣ, ಹನುಮಂತರೆಡ್ಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಬೈರೇಗೌಡ, ನಾಗೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>