ಚುನಾವಣೆಯಲ್ಲಿ ಕಾಂಗ್ರೆಸ್ನ ಎರಡು ಬಣಗಳ ನಡುವೆ ಪೈಪೋಟಿ ನಡೆಯಿತು. ಶಾಸಕ ಎಸ್.ನಾರಾಯಣಸ್ವಾಮಿ ಅವರು ಎಸ್.ನಾರಾಯಣಗೌಡ ಪರ ನಿಂತರೆ, ಕೆಜಿಎಫ್ ಕ್ಷೇತ್ರದ ಸಾಸಕಿ ರೂಪಕಲಾ ಅವರು ವಿಜಯರಾಘವರೆಡ್ಡಿ ಅವರ ಪರ ಲಾಬಿ ನಡೆಸಿದರು. ತಮ್ಮ ಪರ ಇದ್ದ ಅಭ್ಯರ್ಥಿಯನ್ನು ಗೆಲ್ಲಿಸುವುದು ಇಬ್ಬರಿಗೂ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಚುನಾವಣೆಯಲ್ಲಿ ಇಬ್ಬರೂ ಸಮಬಲ ಸಾಧಿಸಿದರೂ ಲಾಟರಿಯಲ್ಲಿ ಕೆಜಿಎಫ್ ಕ್ಷೇತ್ರಕ್ಕೆ ಅದೃಷ್ಟ ಒಲೆಯಿತು.