<p><strong>ಬಂಗಾರಪೇಟೆ</strong>: ತಾಲ್ಲೂಕಿನ ರೈತರು ಒಂದೆಡೆ ಬೇಸಿಗೆ ಬೆಳೆ ನಂಬಿ ಕಷ್ಟಪಡುತ್ತಿದ್ದರೆ, ಮತ್ತೊಂದೆಡೆ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರನ್ನು ಆರ್ಥಿಕವಾಗಿ ಹೈರಾಣು ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.</p>.<p>ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿದ್ದರೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಯೂರಿಯಾವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕವಾಗಿ ವಂಚಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ ಗ್ರಾಮದಲ್ಲಿ ಮಳಿಗೆಯೊಂದಲ್ಲಿ 45 ಕೆ.ಜಿ ತೂಕದ ಯೂರಿಯಾ ಮೂಟೆಯನ್ನು ಬರೋಬ್ಬರಿ ₹ 450ಕ್ಕೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ನಿಯಮದಂತೆ ಸಾಗಣೆ ವೆಚ್ಚ ಸೇರಿ ಗರಿಷ್ಠ ₹ 300 ಇರಬೇಕಾದ ಗೊಬ್ಬರಕ್ಕೆ ಹೆಚ್ಚುವರಿ ₹ 150 ವಸೂಲಿ ಮಾಡಲಾಗುತ್ತಿದೆ ಎಂದು ರೈತರು ದೂರಿದ್ದಾರೆ.</p>.<p>ತಾಲ್ಲೂಕಿನ ಕಾಮಸಮುದ್ರದಲ್ಲಿರುವ ಮಳಿಗೆಯೊಂದರಲ್ಲಿ ಯೂರಿಯಾ ಬೇಕೆಂದರೆ ರಾಸುಗಳ ಬೂಸವನ್ನು ಕಡ್ಡಾಯವಾಗಿ ಖರೀದಿಸಲೇಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದರಿಂದ ರೈತರು ಬೇಡದಿದ್ದರೂ ಪಶು ಆಹಾರಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.</p>.<p>ತಾಲ್ಲೂಕಿನಲ್ಲಿ ಯೂರಿಯಾ ಪೂರೈಕೆ ಕೊಂಚ ಕುಂಠಿತವಾಗಿರುವುದನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರಿಗಳು, ರೈತರ ಅಸಹಾಯಕತೆಯನ್ನು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ.</p>.<p>ಪ್ರಸ್ತುತ ಬೇಸಿಗೆ ರಾಗಿ, ಜೋಳ ಹಾಗೂ ಫಾರಂ ಹುಲ್ಲು ಬೆಳೆದಿರುವ ರೈತರಿಗೆ ಈ ಹಂತದಲ್ಲಿ ಯೂರಿಯಾ ಅತ್ಯಗತ್ಯವಾಗಿದೆ. ತಾಲ್ಲೂಕಿನಲ್ಲಿ ಯೂರಿಯಾ ಬೆಲೆ ಹೆಚ್ಚಾದ ಕಾರಣ ಗಡಿ ಭಾಗದ ರೈತರು ಅನಿವಾರ್ಯವಾಗಿ ತಮಿಳುನಾಡಿಗೆ ತೆರಳಿ ₹ 350 ನೀಡಿ ಗೊಬ್ಬರ ತರುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಕೃಷಿ ಇಲಾಖೆಯ ಮೇಲಿನ ನಂಬಿಕೆಯನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ.</p>.<p><strong>ರೈತರ ಹೆಸರಿನಲ್ಲಿ ಸಬ್ಸಿಡಿ ಪಡೆಯುವ ಕಂಪನಿಗಳು ಮತ್ತು ಮಾರಾಟಗಾರರು ರೈತರನ್ನೇ ಶೋಷಿಸುತ್ತಿರುವುದು ಖಂಡನೀಯ. ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ</strong></p><p><strong>–ಅಪ್ಪೋಜಿರಾವ್ ತಾಲ್ಲೂಕು ಅಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ</strong></p><p>–––</p>.<p><strong>ನಮಗೆ ಬೇಕಿರುವುದು ಯೂರಿಯಾ ಮಾತ್ರ. ದನಗಳ ಬೂಸವನ್ನು ನಾವು ಬೇರೆ ಕಡೆ ಕೊಳ್ಳುತ್ತೇವೆ. ಬೂಸವನ್ನು ಖರೀದಿಸಿದರೆ ಮಾತ್ರ ಗೊಬ್ಬರ ಕೊಡುತ್ತೇವೆ ಎನ್ನುವುದು ಯಾವ ನ್ಯಾಯ? ಇದು ರೈತರಿಗೆ ಮಾಡುತ್ತಿರುವ ದ್ರೋಹ</strong></p><p><strong>–ವಿಜಯ ಕುಮಾರ್ ರೈತ ಪೋಲೇನಹಳ್ಳಿ ಗ್ರಾಮ</strong></p><p>–––</p>.<p><strong>ಯೂರಿಯಾ ಕಂಪನಿಗಳು ಕಾಂಪ್ಲೆಕ್ಸ್ ಗೊಬ್ಬರ ಪಡೆದರೆ ಮಾತ್ರ ಯೂರಿಯಾ ನೀಡುವುದಾಗಿ ಷರತ್ತು ವಿಧಿಸಿವೆ. ಹೀಗಾಗಿ ಅಂಗಡಿ ಮಾಲೀಕರು ಯೂರಿಯಾ ಜೊತೆಗೆ 5 ಕೆ.ಜಿ ಕಾಂಪ್ಲೆಕ್ಸ್ ನೀಡುತ್ತಿರುವುದರಿಂದ ₹ 450 ಪಡೆಯುತ್ತಿದ್ದಾರೆ</strong></p><p><strong>–ಬಿ.ಎನ್.ವಿಜಯ್ ಕುಮಾರ್ ಸಹಾಯಕ ಕೃಷಿ ಅಧಿಕಾರಿ ಬಂಗಾರಪೇಟೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ತಾಲ್ಲೂಕಿನ ರೈತರು ಒಂದೆಡೆ ಬೇಸಿಗೆ ಬೆಳೆ ನಂಬಿ ಕಷ್ಟಪಡುತ್ತಿದ್ದರೆ, ಮತ್ತೊಂದೆಡೆ ರಸಗೊಬ್ಬರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ರೈತರನ್ನು ಆರ್ಥಿಕವಾಗಿ ಹೈರಾಣು ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.</p>.<p>ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿದ್ದರೂ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಯೂರಿಯಾವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕವಾಗಿ ವಂಚಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ ಗ್ರಾಮದಲ್ಲಿ ಮಳಿಗೆಯೊಂದಲ್ಲಿ 45 ಕೆ.ಜಿ ತೂಕದ ಯೂರಿಯಾ ಮೂಟೆಯನ್ನು ಬರೋಬ್ಬರಿ ₹ 450ಕ್ಕೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ನಿಯಮದಂತೆ ಸಾಗಣೆ ವೆಚ್ಚ ಸೇರಿ ಗರಿಷ್ಠ ₹ 300 ಇರಬೇಕಾದ ಗೊಬ್ಬರಕ್ಕೆ ಹೆಚ್ಚುವರಿ ₹ 150 ವಸೂಲಿ ಮಾಡಲಾಗುತ್ತಿದೆ ಎಂದು ರೈತರು ದೂರಿದ್ದಾರೆ.</p>.<p>ತಾಲ್ಲೂಕಿನ ಕಾಮಸಮುದ್ರದಲ್ಲಿರುವ ಮಳಿಗೆಯೊಂದರಲ್ಲಿ ಯೂರಿಯಾ ಬೇಕೆಂದರೆ ರಾಸುಗಳ ಬೂಸವನ್ನು ಕಡ್ಡಾಯವಾಗಿ ಖರೀದಿಸಲೇಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದರಿಂದ ರೈತರು ಬೇಡದಿದ್ದರೂ ಪಶು ಆಹಾರಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.</p>.<p>ತಾಲ್ಲೂಕಿನಲ್ಲಿ ಯೂರಿಯಾ ಪೂರೈಕೆ ಕೊಂಚ ಕುಂಠಿತವಾಗಿರುವುದನ್ನೇ ಬಂಡವಾಳವಾಗಿಸಿಕೊಂಡಿರುವ ವ್ಯಾಪಾರಿಗಳು, ರೈತರ ಅಸಹಾಯಕತೆಯನ್ನು ಹಣವನ್ನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ.</p>.<p>ಪ್ರಸ್ತುತ ಬೇಸಿಗೆ ರಾಗಿ, ಜೋಳ ಹಾಗೂ ಫಾರಂ ಹುಲ್ಲು ಬೆಳೆದಿರುವ ರೈತರಿಗೆ ಈ ಹಂತದಲ್ಲಿ ಯೂರಿಯಾ ಅತ್ಯಗತ್ಯವಾಗಿದೆ. ತಾಲ್ಲೂಕಿನಲ್ಲಿ ಯೂರಿಯಾ ಬೆಲೆ ಹೆಚ್ಚಾದ ಕಾರಣ ಗಡಿ ಭಾಗದ ರೈತರು ಅನಿವಾರ್ಯವಾಗಿ ತಮಿಳುನಾಡಿಗೆ ತೆರಳಿ ₹ 350 ನೀಡಿ ಗೊಬ್ಬರ ತರುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಕೃಷಿ ಇಲಾಖೆಯ ಮೇಲಿನ ನಂಬಿಕೆಯನ್ನು ರೈತರು ಕಳೆದುಕೊಳ್ಳುತ್ತಿದ್ದಾರೆ.</p>.<p><strong>ರೈತರ ಹೆಸರಿನಲ್ಲಿ ಸಬ್ಸಿಡಿ ಪಡೆಯುವ ಕಂಪನಿಗಳು ಮತ್ತು ಮಾರಾಟಗಾರರು ರೈತರನ್ನೇ ಶೋಷಿಸುತ್ತಿರುವುದು ಖಂಡನೀಯ. ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ</strong></p><p><strong>–ಅಪ್ಪೋಜಿರಾವ್ ತಾಲ್ಲೂಕು ಅಧ್ಯಕ್ಷ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ</strong></p><p>–––</p>.<p><strong>ನಮಗೆ ಬೇಕಿರುವುದು ಯೂರಿಯಾ ಮಾತ್ರ. ದನಗಳ ಬೂಸವನ್ನು ನಾವು ಬೇರೆ ಕಡೆ ಕೊಳ್ಳುತ್ತೇವೆ. ಬೂಸವನ್ನು ಖರೀದಿಸಿದರೆ ಮಾತ್ರ ಗೊಬ್ಬರ ಕೊಡುತ್ತೇವೆ ಎನ್ನುವುದು ಯಾವ ನ್ಯಾಯ? ಇದು ರೈತರಿಗೆ ಮಾಡುತ್ತಿರುವ ದ್ರೋಹ</strong></p><p><strong>–ವಿಜಯ ಕುಮಾರ್ ರೈತ ಪೋಲೇನಹಳ್ಳಿ ಗ್ರಾಮ</strong></p><p>–––</p>.<p><strong>ಯೂರಿಯಾ ಕಂಪನಿಗಳು ಕಾಂಪ್ಲೆಕ್ಸ್ ಗೊಬ್ಬರ ಪಡೆದರೆ ಮಾತ್ರ ಯೂರಿಯಾ ನೀಡುವುದಾಗಿ ಷರತ್ತು ವಿಧಿಸಿವೆ. ಹೀಗಾಗಿ ಅಂಗಡಿ ಮಾಲೀಕರು ಯೂರಿಯಾ ಜೊತೆಗೆ 5 ಕೆ.ಜಿ ಕಾಂಪ್ಲೆಕ್ಸ್ ನೀಡುತ್ತಿರುವುದರಿಂದ ₹ 450 ಪಡೆಯುತ್ತಿದ್ದಾರೆ</strong></p><p><strong>–ಬಿ.ಎನ್.ವಿಜಯ್ ಕುಮಾರ್ ಸಹಾಯಕ ಕೃಷಿ ಅಧಿಕಾರಿ ಬಂಗಾರಪೇಟೆ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>