ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ ‌| ಆಟದ ಮೈದಾನದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ: ಸಾರ್ವಜನಿಕರ ವಿರೋಧ

ವಿ ರಾಗೋಪಾಲ್
Published : 19 ಸೆಪ್ಟೆಂಬರ್ 2025, 4:50 IST
Last Updated : 19 ಸೆಪ್ಟೆಂಬರ್ 2025, 4:50 IST
ಫಾಲೋ ಮಾಡಿ
Comments
ಶಾಲಾ ಕ್ರೀಡಾಂಗಣಕ್ಕೆ ಸ್ಥಳಾಂತರವಾಗಿರುವ ಬಸ್ ನಿಲ್ದಾಣ 
ಶಾಲಾ ಕ್ರೀಡಾಂಗಣಕ್ಕೆ ಸ್ಥಳಾಂತರವಾಗಿರುವ ಬಸ್ ನಿಲ್ದಾಣ 
ಪರ್ಯಾಯ ಬಸ್ ನಿಲ್ದಾಣದ ಅಗತ್ಯ ಏಕೆ?
1978ರಲ್ಲಿ ನಿರ್ಮಾಣವಾಗಿದ್ದ ನಗರದ ಬಸ್‌ ನಿಲ್ದಾಣ ಕಿರಿದಾಗಿದ್ದು ಶಿಥಿಲವಾಗಿದೆ. ಜೊತೆಗೆ ಪ್ರಯಾಣಿಕರಿಗೆ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಶಾಸಕರು ಹಾಗೂ ನಗರಸಭೆ ಅಧಿಕಾರಿಗಳು ಸುಮಾರು ₹21 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.30 ರಂದು ನೂತನ ಬಸ್ ನಿಲ್ದಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಕಾಮಗಾರಿಯು ಒಂದು ವರ್ಷಕ್ಕೆ ಪೂರ್ಣಗೊಳ್ಳಲಿದೆ. ಹಾಗಾಗಿ ಬಸ್ ನಿಲ್ದಾಣಕ್ಕೆ ಪರ್ಯಾಯವಾಗಿ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನವನ್ನು ಶಾಸಕ ಕೆ.ವೈ.ನಂಜೇಗೌಡ ತಹಶೀಲ್ದಾರ್ ಎಂ.ವಿ.ರೂಪ ಅವರು ಗುರುತಿಸಿದ್ದಾರೆ. ಅದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಶೀಘ್ರ ನಿಲ್ದಾಣ ಸ್ಥಳಾಂತರ
ತಾತ್ಕಾಲಿಕ ಬಸ್ ನಿಲ್ದಾಣವನ್ನು ಆಟದ ಮೈದಾನದಿಂದ ರೈಲ್ವೆ ಮೇಲ್ಸೇತುವೆ ಪಕ್ಕದಲ್ಲಿರುವ ಸರ್ಕಾರಿ ಜಮೀನಿಗೆ ವರ್ಗಾಯಿಸಲು ಶಾಸಕ ಕೆ.ವೈ.ನಂಜೇಗೌಡರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಹಾಗೂ ತಂಗುದಾಣ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಂಡ ನಂತರ ಬಸ್ ನಿಲ್ದಾಣ ಸ್ಥಳಾಂತರಿಸಲಾಗುವುದು.- ಪ್ರದೀಪ್ ಕುಮಾರ್, ಮಾಲೂರು ನಗರಸಭಾ ಆಯುಕ್ತ
ನಗರದಲ್ಲಿ ಉತ್ತಮ ಸ್ಥಳಗಳಿವೆ ಸೂಚಿಸಿ
ನೂತನ ಬಸ್ ನಿಲ್ದಾಣ ಮಾಡುತ್ತಿರುವುದು ಉತ್ತಮ ಸಂಗತಿ. ಆದರೆ, ಬಸ್ ನಿಲ್ದಾಣವನ್ನು ಶಾಲಾ ಮೈದಾನಕ್ಕೆ ಸ್ಥಳಾಂತರಿಸಿರುವುದು ಅವೈಜ್ಞಾನಿಕ. ಆಟದ ಮೈದಾನದ ಸುತ್ತಲೂ ಶಾಲಾ ಕಾಲೇಜುಗಳಿದ್ದು, ಮಕ್ಕಳ ಕಲಿಕೆಗೆ ತೊಂದರೆಯಾಗಲಿದೆ. ನಗರದಲ್ಲಿ ಇನ್ನೂ ಉತ್ತಮ ಜಾಗಗಳಿವೆ ಅವುಗಳನ್ನು ಸೂಚಿಸಬಹುದು.- ಪ್ರದೀಪ್ ರೆಡ್ಡಿ, ಕೆಪಿಸಿಸಿ ಸದಸ್ಯ
ಮುಖಂಡರ ಬಳಿ ಚರ್ಚಿಸಿ
ಆಟದ ಮೈದಾನಕ್ಕೆ ಬಸ್ ನಿಲ್ದಾಣ ಸ್ಥಳಾಂತರ ಅವೈಜ್ಞಾನಿಕ. ನಗರದಲ್ಲಿ ತಾತ್ಕಾಲಿಕ ಬಸ್ ನಿರ್ಮಾಣಕ್ಕೆ ಸೂಕ್ತ ಸ್ಥಳಗಳಿವೆ. ಶಾಸಕರಿಗೆ ನಗರದ ಬಗ್ಗೆ ಮಾಹಿತಿ ಕೊರತೆ ಇದೆ. ನಗರದ ಹಿರಿಯ ಹಾಗೂ ಇತರೆ ಮುಖಂಡರ ಬಳಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಿ.- ಆರ್.ಪ್ರಭಾಕರ್, ಎಸ್‌ಜೆಪಿ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT