<p><strong>ಕೋಲಾರ</strong>: ತಾಲ್ಲೂಕಿನ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಜಿಮಲೆ ಗ್ರಾಮದಲ್ಲಿ ನಿಷೇಧಿತ ಮಾರ್ವೆ (ಕ್ಯಾಟ್) ಮೀನು ಸಾಕಾಣಿಕೆ ಮಾಡುತ್ತಿದ್ದ ಕೇಂದ್ರದ ಮೇಲೆ ಗುರುವಾರ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ನೇತೃತ್ವದ ತಂಡವು ಮೀನು ಸಾಕಾಣಿಕೆ ತೊಟ್ಟಿಗಳನ್ನು ನಾಶಪಡಿಸಿತು.</p>.<p>ಬೆಂಗಳೂರಿನ ಹುಸೇನ್ ಸಾಬು ಎಂಬುವರು ಚಂಜಿಮಲೆ ಗ್ರಾಮದ ರಾಜಣ್ಣ ಎಂಬುವರ ಜಮೀನನ್ನು ಗುತ್ತಿಗೆಗೆ ಪಡೆದು 5 ತೊಟ್ಟಿಗಳನ್ನು ನಿರ್ಮಿಸಿ ಸುಮಾರು 6 ಲಕ್ಷದಷ್ಟು ಮಾರ್ವೆ ಮೀನು ಸಾಕಾಣಿಕೆ ಮಾಡುತ್ತಿದ್ದರು. ರಾಜಣ್ಣ ಮೀನು ಸಾಕಾಣಿಕೆಯ ಜವಾಬ್ದಾರಿ ಹೊತ್ತಿದ್ದರು.</p>.<p>ಸೀತಿಹೊಸೂರು ಗ್ರಾಮದ ಬಳಿಯ ಕೆ.ಸಿ ವ್ಯಾಲಿ ಯೋಜನೆ ಕಾಲುವೆಯಿಂದ ಪೈಪ್ಲೈನ್ ಮೂಲಕ ಮೀನು ಸಾಕಾಣಿಕೆಗೆ ಅಕ್ರಮವಾಗಿ ನೀರಿನ ಸಂಪರ್ಕ ಪಡೆಯಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸೀತಿಹೊಸೂರು ಗ್ರಾಮದ ಮುರಳಿಗೌಡ ಮತ್ತು ಗ್ರಾಮಸ್ಥರ ಮೇಲೆ ತಿಪ್ಪೇನಹಳ್ಳಿಯ ಕೆಲವರು ಇತ್ತೀಚೆಗೆ ಹಲ್ಲೆ ನಡೆಸಿದ್ದರು.</p>.<p>ನಿಷೇಧಿತ ಮಾರ್ವೆ ಮೀನುಗಳ ಸಾಕಾಣಿಕೆ ಸಂಬಂಧ ಸೀತಿಹೊಸೂರು ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಇತ್ತೀಚೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ 3 ದಿನದೊಳಗೆ ಮೀನಿನ ತೊಟ್ಟಿಗಳನ್ನು ನಾಶಪಡಿಸುವಂತೆ ಜಮೀನು ಮಾಲೀಕ ರಾಜಣ್ಣ ಅವರಿಗೆ ಎಚ್ಚರಿಕೆ ನೀಡಿದ್ದರು.</p>.<p>ಆದರೂ ರಾಜಣ್ಣ ಅವರು ಮೀನು ಸಾಕಾಣಿಕೆ ಮುಂದುವರಿಸಿದ್ದರು. ಹೀಗಾಗಿ ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ ಪೊಲೀಸ್ ಭದ್ರತೆಯೊಂದಿಗೆ ಜಮೀನಿನ ಮೇಲೆ ದಾಳಿ ನಡೆಸಿ ಮೀನಿನ ತೊಟ್ಟಿಗಳನ್ನು ತೆರವುಗೊಳಿಸಿದರು. ತೊಟ್ಟಿಗಳಲ್ಲಿದ್ದ ಮೀನುಗಳನ್ನು ಮರಿಗಳನ್ನು ಗುಂಡಿಗೆ ಸುರಿದು ಮಣ್ಣಿನಿಂದ ಮುಚ್ಚಲಾಯಿತು.</p>.<p><strong>ಅಪಾಯಕಾರಿ:</strong> ‘ದೇಶದಲ್ಲಿ ಮಾರ್ವೆ ಮೀನು ಸಾಕಾಣಿಕೆ ನಿರ್ಬಂಧಿಸಲಾಗಿದೆ. ಈ ಮೀನುಗಳನ್ನು ಆಹಾರವಾಗಿ ಸೇವಿಸುವುದು ಅಪಾಯಕಾರಿ. ಮಾರ್ವೆ ಮೀನಿಗೆ ಹೊರ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಕಾರಣಕ್ಕೆ ಹುಸೇನ್ ಸಾಬ್ ಅವರು ಕದ್ದುಮುಚ್ಚಿ ಮೀನು ಸಾಕಾಣಿಕೆ ಮಾಡಿದ್ದರು. ಜಮೀನು ಮಾಲೀಕ ರಾಜಣ್ಣ ಅವರ ವಿರುದ್ಧ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಪೆದ್ದಯ್ಯ ಮಾಹಿತಿ ನೀಡಿದರು.</p>.<p>ಅಧಿಕಾರಿಗಳು ಮೀನು ಸಾಕಾಣಿಕೆ ತೊಟ್ಟಿಗಳನ್ನು ತೆರವು ಮಾಡುತ್ತಿದ್ದ ವೇಳೆ ಸುತ್ತಮುತ್ತಲಿನ ಗ್ರಾಮಗಳ ಯುವಕರು ಗೋಣಿ ಚೀಲಗಳಲ್ಲಿ ಮೀನು ತುಂಬಿಸಿಕೊಳ್ಳಲು ಮುಗಿಬಿದ್ದರು. ಈ ಮೀನುಗಳನ್ನು ತಿನ್ನಬಾರದೆಂದು ಅಧಿಕಾರಿಗಳು ಹಾಗೂ ಪೊಲೀಸರು ಮನವಿ ಮಾಡಿದರೂ ಯುವಕರು ಚೀಲಗಳಲ್ಲಿ ಮೀನು ತುಂಬಿಸಿಕೊಂಡು ಹೋದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ತಾಲ್ಲೂಕಿನ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಜಿಮಲೆ ಗ್ರಾಮದಲ್ಲಿ ನಿಷೇಧಿತ ಮಾರ್ವೆ (ಕ್ಯಾಟ್) ಮೀನು ಸಾಕಾಣಿಕೆ ಮಾಡುತ್ತಿದ್ದ ಕೇಂದ್ರದ ಮೇಲೆ ಗುರುವಾರ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ನೇತೃತ್ವದ ತಂಡವು ಮೀನು ಸಾಕಾಣಿಕೆ ತೊಟ್ಟಿಗಳನ್ನು ನಾಶಪಡಿಸಿತು.</p>.<p>ಬೆಂಗಳೂರಿನ ಹುಸೇನ್ ಸಾಬು ಎಂಬುವರು ಚಂಜಿಮಲೆ ಗ್ರಾಮದ ರಾಜಣ್ಣ ಎಂಬುವರ ಜಮೀನನ್ನು ಗುತ್ತಿಗೆಗೆ ಪಡೆದು 5 ತೊಟ್ಟಿಗಳನ್ನು ನಿರ್ಮಿಸಿ ಸುಮಾರು 6 ಲಕ್ಷದಷ್ಟು ಮಾರ್ವೆ ಮೀನು ಸಾಕಾಣಿಕೆ ಮಾಡುತ್ತಿದ್ದರು. ರಾಜಣ್ಣ ಮೀನು ಸಾಕಾಣಿಕೆಯ ಜವಾಬ್ದಾರಿ ಹೊತ್ತಿದ್ದರು.</p>.<p>ಸೀತಿಹೊಸೂರು ಗ್ರಾಮದ ಬಳಿಯ ಕೆ.ಸಿ ವ್ಯಾಲಿ ಯೋಜನೆ ಕಾಲುವೆಯಿಂದ ಪೈಪ್ಲೈನ್ ಮೂಲಕ ಮೀನು ಸಾಕಾಣಿಕೆಗೆ ಅಕ್ರಮವಾಗಿ ನೀರಿನ ಸಂಪರ್ಕ ಪಡೆಯಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸೀತಿಹೊಸೂರು ಗ್ರಾಮದ ಮುರಳಿಗೌಡ ಮತ್ತು ಗ್ರಾಮಸ್ಥರ ಮೇಲೆ ತಿಪ್ಪೇನಹಳ್ಳಿಯ ಕೆಲವರು ಇತ್ತೀಚೆಗೆ ಹಲ್ಲೆ ನಡೆಸಿದ್ದರು.</p>.<p>ನಿಷೇಧಿತ ಮಾರ್ವೆ ಮೀನುಗಳ ಸಾಕಾಣಿಕೆ ಸಂಬಂಧ ಸೀತಿಹೊಸೂರು ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಇತ್ತೀಚೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ 3 ದಿನದೊಳಗೆ ಮೀನಿನ ತೊಟ್ಟಿಗಳನ್ನು ನಾಶಪಡಿಸುವಂತೆ ಜಮೀನು ಮಾಲೀಕ ರಾಜಣ್ಣ ಅವರಿಗೆ ಎಚ್ಚರಿಕೆ ನೀಡಿದ್ದರು.</p>.<p>ಆದರೂ ರಾಜಣ್ಣ ಅವರು ಮೀನು ಸಾಕಾಣಿಕೆ ಮುಂದುವರಿಸಿದ್ದರು. ಹೀಗಾಗಿ ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ ಪೊಲೀಸ್ ಭದ್ರತೆಯೊಂದಿಗೆ ಜಮೀನಿನ ಮೇಲೆ ದಾಳಿ ನಡೆಸಿ ಮೀನಿನ ತೊಟ್ಟಿಗಳನ್ನು ತೆರವುಗೊಳಿಸಿದರು. ತೊಟ್ಟಿಗಳಲ್ಲಿದ್ದ ಮೀನುಗಳನ್ನು ಮರಿಗಳನ್ನು ಗುಂಡಿಗೆ ಸುರಿದು ಮಣ್ಣಿನಿಂದ ಮುಚ್ಚಲಾಯಿತು.</p>.<p><strong>ಅಪಾಯಕಾರಿ:</strong> ‘ದೇಶದಲ್ಲಿ ಮಾರ್ವೆ ಮೀನು ಸಾಕಾಣಿಕೆ ನಿರ್ಬಂಧಿಸಲಾಗಿದೆ. ಈ ಮೀನುಗಳನ್ನು ಆಹಾರವಾಗಿ ಸೇವಿಸುವುದು ಅಪಾಯಕಾರಿ. ಮಾರ್ವೆ ಮೀನಿಗೆ ಹೊರ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಕಾರಣಕ್ಕೆ ಹುಸೇನ್ ಸಾಬ್ ಅವರು ಕದ್ದುಮುಚ್ಚಿ ಮೀನು ಸಾಕಾಣಿಕೆ ಮಾಡಿದ್ದರು. ಜಮೀನು ಮಾಲೀಕ ರಾಜಣ್ಣ ಅವರ ವಿರುದ್ಧ ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿ ಪೆದ್ದಯ್ಯ ಮಾಹಿತಿ ನೀಡಿದರು.</p>.<p>ಅಧಿಕಾರಿಗಳು ಮೀನು ಸಾಕಾಣಿಕೆ ತೊಟ್ಟಿಗಳನ್ನು ತೆರವು ಮಾಡುತ್ತಿದ್ದ ವೇಳೆ ಸುತ್ತಮುತ್ತಲಿನ ಗ್ರಾಮಗಳ ಯುವಕರು ಗೋಣಿ ಚೀಲಗಳಲ್ಲಿ ಮೀನು ತುಂಬಿಸಿಕೊಳ್ಳಲು ಮುಗಿಬಿದ್ದರು. ಈ ಮೀನುಗಳನ್ನು ತಿನ್ನಬಾರದೆಂದು ಅಧಿಕಾರಿಗಳು ಹಾಗೂ ಪೊಲೀಸರು ಮನವಿ ಮಾಡಿದರೂ ಯುವಕರು ಚೀಲಗಳಲ್ಲಿ ಮೀನು ತುಂಬಿಸಿಕೊಂಡು ಹೋದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>