ಬಂಗಾರಪೇಟೆ: ತಾಲ್ಲೂಕಿನಲ್ಲಿ ಹೋಂ ಕ್ವಾರಂಟೈನ್ಲ್ಲಿ 15 ಜನರಿದ್ದು, ಯಾರೊಬ್ಬರಿಗೂ ಸೋಂಕು ದೃಢಪಟ್ಟಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವಿಜಯಕುಮಾರಿ ತಿಳಿಸಿದರು.
15 ಜನರಿಗೂ ಹೋಂ ಕ್ವಾರಂಟೈನ್ ಮುದ್ರೆ ಹಾಕಿದ್ದು, ಮನೆಯಿಂದ ಹೊರಗೆ ಬರದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ನಿತ್ಯ ಅವರ ಮನೆಗಳಿಗೆ ತೆರಳಿ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
15 ಜನರ ಪೈಕಿ ಇಬ್ಬರು 28 ದಿನದ ಹೋಂ ಕ್ವಾರಂಟೈನ್ ಅವಧಿ ಮುಗಿದಿದೆ. 4 ಜನ 20 ದಿನ ಪೂರ್ಣಗೊಳಿಸಿದ್ದಾರೆ. 4 ಜನರು 14 ದಿನ ಪೂರ್ಣಗೊಳಿಸಿದ್ದು, 5 ಜನರು ಇನ್ನೂ 14 ದಿನ ಪೂರ್ಣಗೊಳಿಸಿಲ್ಲ ಎಂದು ಮಾಹಿತಿ ನೀಡಿದರು.
ಗಂಭೀರತೆ ಅರಿತಿಲ್ಲ: ಪಟ್ಟಣದಲ್ಲಿ ಬೆಳಗ್ಗೆ 10 ಗಂಟೆವರೆಗೂ ದಿನಸಿ ಕೊಂಡುಕೊಳ್ಳಲು ಮತ್ತು 8.30 ರಿಂದ 2 ಗಂಟೆಯವರೆಗೂ ಎಪಿಎಂಸಿಯಲ್ಲಿ ತರಕಾರಿ ಕೊಂಡುಕೊಳ್ಳಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭ ತರಕಾರಿ ಕೊಳ್ಳಲು ಮುಗಿಬೀಳುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ.