<p><strong>ಕೋಲಾರ:</strong> ಅಂತರಜಾತಿ ಮದುವೆಗಳಿಗೂ ಮುನ್ನ ಉಪಜಾತಿಗಳಲ್ಲಿ ವಿವಾಹಗಳಾಗಬೇಕು. ಪ್ರೇಮ ವಿವಾಹಗಳ ಜೊತೆಗೆ ಪೋಷಕರೇ ಅಂತರ್ಜಾತಿ ವಿವಾಹ ಆಯೋಜಿಸುವ ಹಂತಕ್ಕೆ ನಮ್ಮ ಸಮಾಜ ಬೆಳೆಯಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಆಶಿಸಿದರು.</p>.<p>‘ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಅಂಗವಾಗಿ ಅರಿವು ಭಾರತ ಸಂಸ್ಥೆಯು ತಾಲ್ಲೂಕಿನ ನಾಗನಾಳ ಗ್ರಾಮದ ವಿ.ಮಂಜುನಾಥ್ ನಾಗನಾಳ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕೇವಲ ಕಾನೂನಿನಿಂದ ಎಲ್ಲಾ ಬದಲಾವಣೆಗಳು ಸಾಧ್ಯವಿಲ್ಲ. ಸಾಮಾಜಿಕ ಪರಿವರ್ತನೆಗೆ ನಾಗರಿಕರು ಪ್ರಯತ್ನಿಸಬೇಕು, ಮಾನವೀಯ ಮೌಲ್ಯಗಳನ್ನು ಹರಡಬೇಕು ಎಂದು ಹೇಳಿದರು.</p>.<p>ಮಾನವೀಯ ಮೌಲ್ಯಗಳ ಪ್ರತಿಪಾದನೆಯಿಂದ ಗಟ್ಟಿ ಮನಸ್ಸುಗಳನ್ನೂ ಮೃದುಗೊಳಿಸಬಹುದಾಗಿದೆ. ಹಲವಾರು ಜಟಿಲ ಸಮಸ್ಯೆಗಳನ್ನೂ ಸರಿಯಾದ ಮಾರ್ಗದಿಂದ ಸರಿಪಡಿಸಬಹುದಾಗಿದೆ ಎಂದರು.</p>.<p>ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಸುದರ್ಶನ್ ಮಾತನಾಡಿ, ಅರಿವು ಕಾರ್ಯಕ್ರಮಗಳ ನಿರಂತರ ಪ್ರಯತ್ನಕ್ಕೆ ಬೆಂಬಲ ಸೂಚಿಸಿ ಪ್ರತಿ ಗ್ರಾಮದಲ್ಲೂ ಸಹಭೋಜನ ಏರ್ಪಡಿಸಲು ಸೂಚಿಸಿದರು. ದೂರದವರೂ ಹತ್ತಿರವಾಗಿ ಸ್ನೇಹ ಸಂಬಂಧಗಳು ಸದೃಢಗೊಳ್ಳುತ್ತವೆ ಎಂದು ತಿಳಿಸಿದರು.</p>.<p>ಪೊಲೀಸ್ ತರಬೇತಿ ಕೇಂದ್ರದ ಡಿಐಜಿಪಿ ಡಿ.ದೇವರಾಜ್ ಮಾತನಾಡಿ, ‘ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಅರಿವು ಸಹಭೋಜನ ಕಾರ್ಯಕ್ರಮದಿಂದ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾತನಾಡಿ, ‘ಯುವಜನರನ್ನು ಮಾನಸಿಕವಾಗಿ ಸಿದ್ಧಪಡಿಸಿಕೊಂಡರೆ ಅಸ್ಪೃಶ್ಯತೆ ನಿರ್ಮೂಲನೆ ಸಲೀಸಾಗುತ್ತದೆ. ಹಳ್ಳಿ ಕೇಂದ್ರಿತ ಕಾರ್ಯಕ್ರಮಗಳು ಬೇರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ’ ಎಂದು ಸಲಹೆ ನೀಡಿದರು.</p>.<p>ಪ್ರಜಾ ಪರಿವರ್ತನಾ ವೇದಿಕೆಯ ಬಿ.ಗೋಪಾಲ್ ದಿಕ್ಸೂಚಿ ಭಾಷಣ ಮಾಡಿ, ‘ಬಾಬಾ ಸಾಹೇಬರ ಆಶಯಗಳನ್ನು ಈಡೇರಿಸಲು ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವುದು ಮುಖ್ಯ. ಬುದ್ಧರ ಕಾಲದಲ್ಲಿ ಶುರುವಾದ ಸಮಭಾವ ಚಿಂತನೆಯನ್ನು ನಾವೆಲ್ಲ ಕೂಡಿ ಬಲಪಡಿಸಬೇಕು’ ಎಂದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಳ ಸೋಮಣ್ಣ ಮಾತನಾಡಿ, ಶಿಕ್ಷಣ ಮತ್ತು ಆಧುನಿಕತೆಯಿಂದ ಹಳ್ಳಿಗಳು ಬದಲಾಗಿದ್ದರೂ ಕೆಲ ಮೂಢನಂಬಿಕೆಗಳು ಹಾಗೆಯೇ ಉಳಿದಿವೆ ಎಂದು ಹೇಳಿದರು.</p>.<p>ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಡಗೂರು ನಾಗರಾಜ್ ಮಾತನಾಡಿ, ‘ಹೋರಾಟಗಾರರು ಎತ್ತಿದ ಅಸಮಾನತೆಯ ಪ್ರಶ್ನೆಗಳಿಗೆ ಉತ್ತರವಾಗಿ ನಾವೆಲ್ಲ ಸೇರಿ ಮಾಡಬಹುದಾದ ಹಲವು ಕೆಲಸಗಳಿವೆ. ದ್ವೇಷ ಈಗ ಕಡಿಮೆಯಾಗುತ್ತಿದೆ. ಪ್ರೀತಿಯಿಂದ ಹಳ್ಳಿಗಳಲ್ಲಿ ಉಳಿದಿರುವ ತಾರತಮ್ಯವನ್ನು ತಿದ್ದಬಹುದಾಗಿದೆ’ ಎಂದರು.</p>.<p>ಸಹಭೋಜನ ಏರ್ಪಡಿಸಿದ ನಾಗನಾಳ ಮಂಜುನಾಥ್ ದಂಪತಿಗೆ ಗ್ರಾಮರತ್ನ ನೀಡಿ ಗೌರವಿಸಲಾಯಿತು.</p>.<p>ಕಾರ್ಯಕ್ರಮದಲ್ಲಿ ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಕುರಟಹಳ್ಳಿ ರಾಧಾಕೃಷ್ಣ, ಓಂಪ್ರಕಾಶ್, ವಾರಿಧಿ ಮಂಜುನಾಥರೆಡ್ಡಿ, ಸಿ.ಡಿ.ರಾಮಚಂದ್ರೇಗೌಡ, ಮಾಜಿ ಪ್ರಾಂಶುಪಾಲ ಕೃಷ್ಣ, ತಿಪ್ಪಸಂದ್ರ ಶ್ರೀನಿವಾಸ್, ಕುಟೀರ ಶಾಂತಮ್ಮ, ಈ ನೆಲ ಈ ಜಲ ವೆಂಕಟಾಚಲಪತಿ, ಕೂಟೇರಿ ನಂಜಾಮರಿ, ಜಿ.ಮಂಜುನಾಥ್, ನಾಗನಾಳ ರಮೇಶ್, ಶಂಕರ್, ಕೆ.ಎಚ್.ರಾಮಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರೊ.ತಿಲಕ್ ಕಾರ್ಯಕ್ರಮ ನಿರೂಪಿಸಿದರು.</p>.<div><blockquote>ಶಾಂತಿಯುತ ಬದಲಾವಣೆಗೆ ಹಲವು ದಾರಿಗಳನ್ನು ಅರಿವು ಭಾರತ ಸಂಸ್ಥೆ ತೋರಿಸಿಕೊಟ್ಟಿದೆ. ಇಂಥ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಬೇಕು </blockquote><span class="attribution">–ಎಂ.ಆರ್.ರವಿ, ಜಿಲ್ಲಾಧಿಕಾರಿ ಕೋಲಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಅಂತರಜಾತಿ ಮದುವೆಗಳಿಗೂ ಮುನ್ನ ಉಪಜಾತಿಗಳಲ್ಲಿ ವಿವಾಹಗಳಾಗಬೇಕು. ಪ್ರೇಮ ವಿವಾಹಗಳ ಜೊತೆಗೆ ಪೋಷಕರೇ ಅಂತರ್ಜಾತಿ ವಿವಾಹ ಆಯೋಜಿಸುವ ಹಂತಕ್ಕೆ ನಮ್ಮ ಸಮಾಜ ಬೆಳೆಯಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಆಶಿಸಿದರು.</p>.<p>‘ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಅಂಗವಾಗಿ ಅರಿವು ಭಾರತ ಸಂಸ್ಥೆಯು ತಾಲ್ಲೂಕಿನ ನಾಗನಾಳ ಗ್ರಾಮದ ವಿ.ಮಂಜುನಾಥ್ ನಾಗನಾಳ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕೇವಲ ಕಾನೂನಿನಿಂದ ಎಲ್ಲಾ ಬದಲಾವಣೆಗಳು ಸಾಧ್ಯವಿಲ್ಲ. ಸಾಮಾಜಿಕ ಪರಿವರ್ತನೆಗೆ ನಾಗರಿಕರು ಪ್ರಯತ್ನಿಸಬೇಕು, ಮಾನವೀಯ ಮೌಲ್ಯಗಳನ್ನು ಹರಡಬೇಕು ಎಂದು ಹೇಳಿದರು.</p>.<p>ಮಾನವೀಯ ಮೌಲ್ಯಗಳ ಪ್ರತಿಪಾದನೆಯಿಂದ ಗಟ್ಟಿ ಮನಸ್ಸುಗಳನ್ನೂ ಮೃದುಗೊಳಿಸಬಹುದಾಗಿದೆ. ಹಲವಾರು ಜಟಿಲ ಸಮಸ್ಯೆಗಳನ್ನೂ ಸರಿಯಾದ ಮಾರ್ಗದಿಂದ ಸರಿಪಡಿಸಬಹುದಾಗಿದೆ ಎಂದರು.</p>.<p>ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಸುದರ್ಶನ್ ಮಾತನಾಡಿ, ಅರಿವು ಕಾರ್ಯಕ್ರಮಗಳ ನಿರಂತರ ಪ್ರಯತ್ನಕ್ಕೆ ಬೆಂಬಲ ಸೂಚಿಸಿ ಪ್ರತಿ ಗ್ರಾಮದಲ್ಲೂ ಸಹಭೋಜನ ಏರ್ಪಡಿಸಲು ಸೂಚಿಸಿದರು. ದೂರದವರೂ ಹತ್ತಿರವಾಗಿ ಸ್ನೇಹ ಸಂಬಂಧಗಳು ಸದೃಢಗೊಳ್ಳುತ್ತವೆ ಎಂದು ತಿಳಿಸಿದರು.</p>.<p>ಪೊಲೀಸ್ ತರಬೇತಿ ಕೇಂದ್ರದ ಡಿಐಜಿಪಿ ಡಿ.ದೇವರಾಜ್ ಮಾತನಾಡಿ, ‘ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಅರಿವು ಸಹಭೋಜನ ಕಾರ್ಯಕ್ರಮದಿಂದ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.</p>.<p>ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಮಾತನಾಡಿ, ‘ಯುವಜನರನ್ನು ಮಾನಸಿಕವಾಗಿ ಸಿದ್ಧಪಡಿಸಿಕೊಂಡರೆ ಅಸ್ಪೃಶ್ಯತೆ ನಿರ್ಮೂಲನೆ ಸಲೀಸಾಗುತ್ತದೆ. ಹಳ್ಳಿ ಕೇಂದ್ರಿತ ಕಾರ್ಯಕ್ರಮಗಳು ಬೇರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ’ ಎಂದು ಸಲಹೆ ನೀಡಿದರು.</p>.<p>ಪ್ರಜಾ ಪರಿವರ್ತನಾ ವೇದಿಕೆಯ ಬಿ.ಗೋಪಾಲ್ ದಿಕ್ಸೂಚಿ ಭಾಷಣ ಮಾಡಿ, ‘ಬಾಬಾ ಸಾಹೇಬರ ಆಶಯಗಳನ್ನು ಈಡೇರಿಸಲು ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವುದು ಮುಖ್ಯ. ಬುದ್ಧರ ಕಾಲದಲ್ಲಿ ಶುರುವಾದ ಸಮಭಾವ ಚಿಂತನೆಯನ್ನು ನಾವೆಲ್ಲ ಕೂಡಿ ಬಲಪಡಿಸಬೇಕು’ ಎಂದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗನಾಳ ಸೋಮಣ್ಣ ಮಾತನಾಡಿ, ಶಿಕ್ಷಣ ಮತ್ತು ಆಧುನಿಕತೆಯಿಂದ ಹಳ್ಳಿಗಳು ಬದಲಾಗಿದ್ದರೂ ಕೆಲ ಮೂಢನಂಬಿಕೆಗಳು ಹಾಗೆಯೇ ಉಳಿದಿವೆ ಎಂದು ಹೇಳಿದರು.</p>.<p>ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಡಗೂರು ನಾಗರಾಜ್ ಮಾತನಾಡಿ, ‘ಹೋರಾಟಗಾರರು ಎತ್ತಿದ ಅಸಮಾನತೆಯ ಪ್ರಶ್ನೆಗಳಿಗೆ ಉತ್ತರವಾಗಿ ನಾವೆಲ್ಲ ಸೇರಿ ಮಾಡಬಹುದಾದ ಹಲವು ಕೆಲಸಗಳಿವೆ. ದ್ವೇಷ ಈಗ ಕಡಿಮೆಯಾಗುತ್ತಿದೆ. ಪ್ರೀತಿಯಿಂದ ಹಳ್ಳಿಗಳಲ್ಲಿ ಉಳಿದಿರುವ ತಾರತಮ್ಯವನ್ನು ತಿದ್ದಬಹುದಾಗಿದೆ’ ಎಂದರು.</p>.<p>ಸಹಭೋಜನ ಏರ್ಪಡಿಸಿದ ನಾಗನಾಳ ಮಂಜುನಾಥ್ ದಂಪತಿಗೆ ಗ್ರಾಮರತ್ನ ನೀಡಿ ಗೌರವಿಸಲಾಯಿತು.</p>.<p>ಕಾರ್ಯಕ್ರಮದಲ್ಲಿ ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ, ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಕುರಟಹಳ್ಳಿ ರಾಧಾಕೃಷ್ಣ, ಓಂಪ್ರಕಾಶ್, ವಾರಿಧಿ ಮಂಜುನಾಥರೆಡ್ಡಿ, ಸಿ.ಡಿ.ರಾಮಚಂದ್ರೇಗೌಡ, ಮಾಜಿ ಪ್ರಾಂಶುಪಾಲ ಕೃಷ್ಣ, ತಿಪ್ಪಸಂದ್ರ ಶ್ರೀನಿವಾಸ್, ಕುಟೀರ ಶಾಂತಮ್ಮ, ಈ ನೆಲ ಈ ಜಲ ವೆಂಕಟಾಚಲಪತಿ, ಕೂಟೇರಿ ನಂಜಾಮರಿ, ಜಿ.ಮಂಜುನಾಥ್, ನಾಗನಾಳ ರಮೇಶ್, ಶಂಕರ್, ಕೆ.ಎಚ್.ರಾಮಪ್ಪ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಪ್ರೊ.ತಿಲಕ್ ಕಾರ್ಯಕ್ರಮ ನಿರೂಪಿಸಿದರು.</p>.<div><blockquote>ಶಾಂತಿಯುತ ಬದಲಾವಣೆಗೆ ಹಲವು ದಾರಿಗಳನ್ನು ಅರಿವು ಭಾರತ ಸಂಸ್ಥೆ ತೋರಿಸಿಕೊಟ್ಟಿದೆ. ಇಂಥ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಬೇಕು </blockquote><span class="attribution">–ಎಂ.ಆರ್.ರವಿ, ಜಿಲ್ಲಾಧಿಕಾರಿ ಕೋಲಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>