<p><strong>ಶ್ರೀನಿವಾಸಪುರ</strong>: ವಿಧಾನಸಭಾ ಕ್ಷೇತ್ರದಲ್ಲಿ ₹ 35ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅನುದಾನಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಆದೇಶದ ಬಳಿಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭರವಸೆ ನೀಡಿದರು.</p>.<p>ತಾಲ್ಲೂಕಿನ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ‘ತಾಲ್ಲೂಕು ಆಡಳಿತ ನಡೆ ಗ್ರಾಮದ ಕಡೆ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಕೆಲ ಗ್ರಾಮಗಳಿಗೆ ದಶಕಗಳಿಂದ ರಸ್ತೆ ಇಲ್ಲ. ಈ ಹಿನ್ನೆಲೆಯಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಬೇಕು ಎಂಬುದು ನನ್ನ ಗುರಿ. ಕ್ಷೇತ್ರದ 400 ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಹಾಗೂ ಸೋಲಾರ್ ದೀಪ ಅಳವಡಿಸುವ ಯೋಜನೆ ಇದೆ. ಈಗಾಗಲೇ 150 ದೀಪ ಹಾಕಿಸಿದ್ದೇನೆ ಎಂದರು.</p>.<p>ಕೋಲಾರದಿಂದ ಬಿ.ಕೊತ್ತಕೋಟೆಗೆ ಉತ್ತಮ ರಸ್ತೆ ಕಾಮಗಾರಿ ನಡೆಯುತ್ತಿದೆ. ಬಚ್ಚಿರೆಡ್ಡಿಗಾರಿಪಲ್ಲಿ ಬಳಿ ₹ 3 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. 15 ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ಮರಸನಪಲ್ಲಿ ಪೂಲಕುಂಟ್ಲಪಲ್ಲಿ ಮಾರ್ಗ ಮಧ್ಯೆ ₹ 1 ಕೋಟಿ ವೆಚ್ಚದಲ್ಲಿ ಚೆಕ್ಡ್ಯಾಂ ಹಾಕಲಾಗಿದೆ. ಬೀಮಗಾನಪಲ್ಲಿ ಬಳಿ ₹ 3.5 ಕೋಟಿ ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ಮಿಸಲು ಭೂಮಿಪೂಜೆ ಮಾಡಲಾಗುವುದು ಎಂದು ತಿಳಿಸಿದರು.</p>.<p>ಸಾರ್ವಜನಿಕರಿಗೆ ಅನೇಕ ಸಮಸ್ಯೆಗಳು ಇದ್ದು, ಎಲ್ಲವನ್ನು ಯುಗಾದಿ ಹಬ್ಬದೊಳಗೆ ಸರಿಪಡಿಸಬೇಕು ಎಂದು ಇಒ, ಆಡಳಿತ ಅಧಿಕಾರಿ, ಪಿಡಿಒಗೆ ಸೂಚಿಸಿದರು.</p>.<p>ಗೌನಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂಧಿಸಿದಂತೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಕೆಲ ಪಡಿತರ ಚೀಟಿಗಳು ಸಮಸ್ಯೆ ಇದ್ದು, ಅದನ್ನ ಸರಿಪಡಿಸುವಂತೆ ನಿರ್ದೇಶನ ನೀಡಿದರು.</p>.<p>ಕೂರಿಗೇಪಲ್ಲಿ 23 ಅರ್ಜಿಗಳು, ಬೈರಗಾನಪಲ್ಲಿ 43 ಅರ್ಜಿಗಳು, ಗೌನಿಪಲ್ಲಿ 10 ಅರ್ಜಿಗಳು, ಕೋಡಿಪಲ್ಲಿ 46 ಅರ್ಜಿಗಳ ಸ್ವೀಕರಿಸಲಾಯಿತು.</p>.<p>ತಾ.ಪಂ ಇಒ ಕೆ.ಸರ್ವೇಶ್, ರಾಮಪ್ಪ, ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಕುಮಾರ್, ರವಿಕುಮಾರ್, ನಾರಾಯಣಸ್ವಾಮಿ, ಚಲಪತಿ, ಮುಖಂಡರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕೆ.ಎ.ಸುಧಾಕರ್, ರಘುನಾಥಪುರ, ಸುಬ್ರಮಣ , ಕೆ.ವಿ.ಶ್ರೀನಿವಾಸ್, ಬೈರಗಾನಪಲ್ಲಿ ರಘುನಾಥರೆಡ್ಡಿ, ಕೆ.ವಿ.ಮಂಜುನಾಥ್, ಎಂ.ಜಿ.ಕೃಷ್ಣಾರೆಡ್ಡಿ , ಶೇಷಾದ್ರಿನಾಯಕ್, ವಿ.ಅನಿಲ್ಕುಮಾರ್, ಜಿ.ವಿ.ಶ್ರೀನಿವಾಸ್, ಸೀನಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ</strong>: ವಿಧಾನಸಭಾ ಕ್ಷೇತ್ರದಲ್ಲಿ ₹ 35ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅನುದಾನಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಆದೇಶದ ಬಳಿಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭರವಸೆ ನೀಡಿದರು.</p>.<p>ತಾಲ್ಲೂಕಿನ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ‘ತಾಲ್ಲೂಕು ಆಡಳಿತ ನಡೆ ಗ್ರಾಮದ ಕಡೆ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>ಕೆಲ ಗ್ರಾಮಗಳಿಗೆ ದಶಕಗಳಿಂದ ರಸ್ತೆ ಇಲ್ಲ. ಈ ಹಿನ್ನೆಲೆಯಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಬೇಕು ಎಂಬುದು ನನ್ನ ಗುರಿ. ಕ್ಷೇತ್ರದ 400 ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಹಾಗೂ ಸೋಲಾರ್ ದೀಪ ಅಳವಡಿಸುವ ಯೋಜನೆ ಇದೆ. ಈಗಾಗಲೇ 150 ದೀಪ ಹಾಕಿಸಿದ್ದೇನೆ ಎಂದರು.</p>.<p>ಕೋಲಾರದಿಂದ ಬಿ.ಕೊತ್ತಕೋಟೆಗೆ ಉತ್ತಮ ರಸ್ತೆ ಕಾಮಗಾರಿ ನಡೆಯುತ್ತಿದೆ. ಬಚ್ಚಿರೆಡ್ಡಿಗಾರಿಪಲ್ಲಿ ಬಳಿ ₹ 3 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. 15 ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ಮರಸನಪಲ್ಲಿ ಪೂಲಕುಂಟ್ಲಪಲ್ಲಿ ಮಾರ್ಗ ಮಧ್ಯೆ ₹ 1 ಕೋಟಿ ವೆಚ್ಚದಲ್ಲಿ ಚೆಕ್ಡ್ಯಾಂ ಹಾಕಲಾಗಿದೆ. ಬೀಮಗಾನಪಲ್ಲಿ ಬಳಿ ₹ 3.5 ಕೋಟಿ ವೆಚ್ಚದಲ್ಲಿ ಚೆಕ್ಡ್ಯಾಂ ನಿರ್ಮಿಸಲು ಭೂಮಿಪೂಜೆ ಮಾಡಲಾಗುವುದು ಎಂದು ತಿಳಿಸಿದರು.</p>.<p>ಸಾರ್ವಜನಿಕರಿಗೆ ಅನೇಕ ಸಮಸ್ಯೆಗಳು ಇದ್ದು, ಎಲ್ಲವನ್ನು ಯುಗಾದಿ ಹಬ್ಬದೊಳಗೆ ಸರಿಪಡಿಸಬೇಕು ಎಂದು ಇಒ, ಆಡಳಿತ ಅಧಿಕಾರಿ, ಪಿಡಿಒಗೆ ಸೂಚಿಸಿದರು.</p>.<p>ಗೌನಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂಧಿಸಿದಂತೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಕೆಲ ಪಡಿತರ ಚೀಟಿಗಳು ಸಮಸ್ಯೆ ಇದ್ದು, ಅದನ್ನ ಸರಿಪಡಿಸುವಂತೆ ನಿರ್ದೇಶನ ನೀಡಿದರು.</p>.<p>ಕೂರಿಗೇಪಲ್ಲಿ 23 ಅರ್ಜಿಗಳು, ಬೈರಗಾನಪಲ್ಲಿ 43 ಅರ್ಜಿಗಳು, ಗೌನಿಪಲ್ಲಿ 10 ಅರ್ಜಿಗಳು, ಕೋಡಿಪಲ್ಲಿ 46 ಅರ್ಜಿಗಳ ಸ್ವೀಕರಿಸಲಾಯಿತು.</p>.<p>ತಾ.ಪಂ ಇಒ ಕೆ.ಸರ್ವೇಶ್, ರಾಮಪ್ಪ, ಅಭಿವೃದ್ಧಿ ಅಧಿಕಾರಿಗಳಾದ ರಮೇಶ್ ಕುಮಾರ್, ರವಿಕುಮಾರ್, ನಾರಾಯಣಸ್ವಾಮಿ, ಚಲಪತಿ, ಮುಖಂಡರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕೆ.ಎ.ಸುಧಾಕರ್, ರಘುನಾಥಪುರ, ಸುಬ್ರಮಣ , ಕೆ.ವಿ.ಶ್ರೀನಿವಾಸ್, ಬೈರಗಾನಪಲ್ಲಿ ರಘುನಾಥರೆಡ್ಡಿ, ಕೆ.ವಿ.ಮಂಜುನಾಥ್, ಎಂ.ಜಿ.ಕೃಷ್ಣಾರೆಡ್ಡಿ , ಶೇಷಾದ್ರಿನಾಯಕ್, ವಿ.ಅನಿಲ್ಕುಮಾರ್, ಜಿ.ವಿ.ಶ್ರೀನಿವಾಸ್, ಸೀನಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>