ವೇಮಗಲ್: ಗ್ರಾಮದಲ್ಲಿ ಶನಿವಾರ ರಾತ್ರಿ ವೆಂಕಟರಮಣ ಉರುಫ್ ವೆಂಕಿ (33) ಎಂಬುವರನ್ನು ಸ್ನೇಹಿತನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ವೇಮಗಲ್ನ ರಾಕೇಶ್ ಎಂಬಾತ ಈ ಕೃತ್ಯ ಎಸಗಿದ್ದು, ಘಟನೆ ನಂತರ ಆತ ಪರಾರಿಯಾಗಿದ್ದಾನೆ.
ಅವಿವಾಹಿತರಾದ ವೆಂಕಟರಮಣ ಅವರು ರಾಕೇಶ್ನ ಪತ್ನಿಯ ಮೊಬೈಲ್ಗೆ ಆಗಾಗ್ಗೆ ಕರೆ ಮಾಡುತ್ತಿದ್ದರು ಮತ್ತು ಸಂದೇಶ ಕಳುಹಿಸುತ್ತಿದ್ದರು. ಈ ಸಂಗತಿ ತಿಳಿದು ಕೋಪಗೊಂಡಿದ್ದ ರಾಕೇಶ್ ರಾತ್ರಿ ವೆಂಕಟರಮಣ ಜತೆ ಜಗಳವಾಡಿ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ಸಿ ಬ್ಲಾಕ್ ನಿವಾಸಿಯಾದ ವೆಂಕಟರಮಣ ಅವರು ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಕೇಶ್, ಮೀನಿನ ವ್ಯಾಪಾರ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.