ಅದೇ ಸಂಪ್ರದಾಯ ಈಗಲೂ ಮುಂದುವರಿದಿದ್ದು, ಸಂಕ್ರಾಂತಿ ಹಬ್ಬ ಆಚರಿಸಿದರೆ ರಾಸುಗಳು ಸಾಯುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಬೇರೂರಿದೆ. ಈ ಅವ್ಯಕ್ತ ಭಯದಿಂದಾಗಿ ಗ್ರಾಮಸ್ಥರು ಈಗಲೂ ಸಂಕ್ರಾಂತಿ ದಿನ ಹೊಸ ಬಟ್ಟೆ ಧರಿಸುವುದಿಲ್ಲ, ಮನೆಗಳಲ್ಲಿ ಸಿಹಿ ಅಡುಗೆ ಮಾಡುವುದಿಲ್ಲ, ರಾಸುಗಳನ್ನು ಕಿಚ್ಚು ಹಾಯಿಸುವುದಿಲ್ಲ ಮತ್ತು ಮನೆಗಳಲ್ಲಿ ಹಬ್ಬದ ಸಂಭ್ರಮ ಇರುವುದಿಲ್ಲ. ಜನ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡು ಹಬ್ಬದ ದಿನವನ್ನು ಸಾಮಾನ್ಯವಾಗಿ ಕಳೆದುಬಿಡುತ್ತಾರೆ.