‘ಜಿಲ್ಲೆಯಲ್ಲಿ ಚಿನ್ನದ ಗಣಿ ಕೆಲಸ ಕಡಿಮೆಯಾಗುತ್ತಾ ಬಂದಂತೆ ಬೆಮಲ್ ಆರಂಭಿಸದಿದ್ದರೆ ಕೆಜಿಎಫ್ ಭಾಗದ ಜನ ತೊಂದರೆಗೆ ಸಿಲುಕುತ್ತಿದ್ದರು. ಕೆ.ಸಿ ವ್ಯಾಲಿ ವಿಚಾರವಾಗಿ ಜಿಲ್ಲೆಯ ಕೆಲ ಭಾಗದ ರೈತರಿಗೆ ತಮ್ಮ ಭಾಗಕ್ಕೆ ಯಾವಾಗ ನೀರು ಬರುತ್ತದೆ ಎಂಬ ಕಾತುರವಿದೆ. ಆದರೆ, ಆತುರಪಡಬೇಕಿಲ್ಲ. ಜಿಲ್ಲೆಯ ಎಲ್ಲಾ ಭಾಗಕ್ಕೂ ನೀರು ಬರುತ್ತದೆ. ಕೋಲಾರಮ್ಮ ಕೆರೆ ಅಭಿವೃದ್ಧಿ ವಿಚಾರವಾಗಿ ಸಂಸದರು ಮಾಡುತ್ತಿರುವ ಕೆಲಸ ತೃಪ್ತಿ ತಂದಿದೆ’ ಎಂದು ತಿಳಿಸಿದರು.