<p><strong>ಕೋಲಾರ: </strong>‘ವಿದ್ಯಾವಂತರು, ಅಕ್ಷರಸ್ಥರೇ ಈಚೆಗೆ ಸಮಾಜ ಘಾತುಕ, ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿದ್ದು ಭ್ರಷ್ಟಾಚಾರ, ಮೋಸ, ಕಪಟ, ಲಂಚಗುಳಿತನ, ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಕೆ.ಆರ್.ನಾಗರಾಜ್ ಬೇಸರ ವ್ಯಕ್ತಪಡಿಸಿದರು.</p>.<p>ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾಡಳಿತ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ‘ಕರ್ನಾಟಕ ಲೋಕಾಯುಕ್ತ ಕಾಯ್ದೆ–1984’ರ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯ ಬದುಕುವ ಒಂದೆರಡು ದಿನಗಳಿಗಾಗಿ, ಈ ಸಣ್ಣ ಹೊಟ್ಟೆಗಾಗಿ ಏಕಿಷ್ಟು ಭ್ರಷ್ಟಾಚಾರ ನಡೆಸಬೇಕು? ಜೀವನವಿಡೀ ಭ್ರಷ್ಟತೆ, ಅಕ್ರಮದಲ್ಲಿ ತೊಡಗಿರಬೇಕೇ? ಬದುಕಿಗೆ ಇವೆಲ್ಲಾ ಅವಶ್ಯವೇ’ ಎಂದು ಪ್ರಶ್ನಿಸಿದರು.</p>.<p>‘ಕೋವಿಡ್ನಿಂದ ಎಲ್ಲರೂ ಎಷ್ಟು ಕಷ್ಟ ಅನುಭವಿಸಿದೆವು ಎಂಬುದು ಗೊತ್ತೇ ಇದೆ. ಅದು ದೊಡ್ಡ ಪಾಠ ಕಲಿಸಿ ಹೋಗಿದೆ. ಸಂಬಂಧಿಕರು, ಪರಿಚಿತರನ್ನೇ ಕಳೆದುಕೊಂಡೆವು. ಭಯದಲ್ಲೇ ದಿನ ಕಳೆದವು. ಬದುಕುಳಿದವರೇ ಪುಣ್ಯವಂತರು’ ಎಂದರು.</p>.<p><strong>ಹೋಟೆಲ್ನಲ್ಲಿ ಸಪ್ಲೈರ್ ಆಗಿದ್ದೆ…</strong></p>.<p>‘ದನ ಕಾಯುತ್ತಿದ್ದವನ ಮಗನಾದ ನಾನು ಹೋಟೆಲ್ನಲ್ಲಿ ಸಪ್ಲೈರ್ ಆಗಿದ್ದೆ. ಬಾರ್ನಲ್ಲಿ ಕೆಲಸ ಮಾಡಿ ಓದಿ ವಿದ್ಯಾವಂತನಾಗಿದ್ದೇನೆ. ಈಗ ಕೋಲಾರ ಜಿಲ್ಲೆಯಲ್ಲಿ ಹೆಚ್ಚು ವೇತನ ಪಡೆಯುತ್ತಿರುವವನೂ ನಾನೇ’ ಎಂದು ಜಿಲ್ಲಾ ನ್ಯಾಯಾಧೀಶ ಕೆ.ಆರ್.ನಾಗರಾಜ್ ಹೇಳಿದಾಗ ಸಭಾಂಗಣದಲ್ಲಿ ಕರತಾಡನ ಮೊಳಗಿತು.</p>.<p>‘ಈ ಹಾದಿಯಲ್ಲಿ ನಾನು ಬದುಕಲಿಲ್ಲವೇ? ಅದಕ್ಕಾಗಿ ಅಕ್ರಮ ಸಂಪಾದನೆ ಮಾಡಬೇಕಿತ್ತೇ? ಅದು ಸಾಧ್ಯವಾಗದೆ ನಾನು ಬೆಂಗಳೂರಿನಲ್ಲಿ ಮನೆ ಕಟ್ಟಿದ್ದೇನೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದೇನೆ. ನ್ಯಾಯಯುತ ದುಡಿಮೆಯಿಂದ ಸಾಧಿಸಿ ತೋರಿಸಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>‘ವಿದ್ಯಾವಂತರು, ಅಕ್ಷರಸ್ಥರೇ ಈಚೆಗೆ ಸಮಾಜ ಘಾತುಕ, ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿದ್ದು ಭ್ರಷ್ಟಾಚಾರ, ಮೋಸ, ಕಪಟ, ಲಂಚಗುಳಿತನ, ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಕೆ.ಆರ್.ನಾಗರಾಜ್ ಬೇಸರ ವ್ಯಕ್ತಪಡಿಸಿದರು.</p>.<p>ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಜಿಲ್ಲಾಡಳಿತ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಗುರುವಾರ ಇಲ್ಲಿ ಆಯೋಜಿಸಿದ್ದ ‘ಕರ್ನಾಟಕ ಲೋಕಾಯುಕ್ತ ಕಾಯ್ದೆ–1984’ರ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯ ಬದುಕುವ ಒಂದೆರಡು ದಿನಗಳಿಗಾಗಿ, ಈ ಸಣ್ಣ ಹೊಟ್ಟೆಗಾಗಿ ಏಕಿಷ್ಟು ಭ್ರಷ್ಟಾಚಾರ ನಡೆಸಬೇಕು? ಜೀವನವಿಡೀ ಭ್ರಷ್ಟತೆ, ಅಕ್ರಮದಲ್ಲಿ ತೊಡಗಿರಬೇಕೇ? ಬದುಕಿಗೆ ಇವೆಲ್ಲಾ ಅವಶ್ಯವೇ’ ಎಂದು ಪ್ರಶ್ನಿಸಿದರು.</p>.<p>‘ಕೋವಿಡ್ನಿಂದ ಎಲ್ಲರೂ ಎಷ್ಟು ಕಷ್ಟ ಅನುಭವಿಸಿದೆವು ಎಂಬುದು ಗೊತ್ತೇ ಇದೆ. ಅದು ದೊಡ್ಡ ಪಾಠ ಕಲಿಸಿ ಹೋಗಿದೆ. ಸಂಬಂಧಿಕರು, ಪರಿಚಿತರನ್ನೇ ಕಳೆದುಕೊಂಡೆವು. ಭಯದಲ್ಲೇ ದಿನ ಕಳೆದವು. ಬದುಕುಳಿದವರೇ ಪುಣ್ಯವಂತರು’ ಎಂದರು.</p>.<p><strong>ಹೋಟೆಲ್ನಲ್ಲಿ ಸಪ್ಲೈರ್ ಆಗಿದ್ದೆ…</strong></p>.<p>‘ದನ ಕಾಯುತ್ತಿದ್ದವನ ಮಗನಾದ ನಾನು ಹೋಟೆಲ್ನಲ್ಲಿ ಸಪ್ಲೈರ್ ಆಗಿದ್ದೆ. ಬಾರ್ನಲ್ಲಿ ಕೆಲಸ ಮಾಡಿ ಓದಿ ವಿದ್ಯಾವಂತನಾಗಿದ್ದೇನೆ. ಈಗ ಕೋಲಾರ ಜಿಲ್ಲೆಯಲ್ಲಿ ಹೆಚ್ಚು ವೇತನ ಪಡೆಯುತ್ತಿರುವವನೂ ನಾನೇ’ ಎಂದು ಜಿಲ್ಲಾ ನ್ಯಾಯಾಧೀಶ ಕೆ.ಆರ್.ನಾಗರಾಜ್ ಹೇಳಿದಾಗ ಸಭಾಂಗಣದಲ್ಲಿ ಕರತಾಡನ ಮೊಳಗಿತು.</p>.<p>‘ಈ ಹಾದಿಯಲ್ಲಿ ನಾನು ಬದುಕಲಿಲ್ಲವೇ? ಅದಕ್ಕಾಗಿ ಅಕ್ರಮ ಸಂಪಾದನೆ ಮಾಡಬೇಕಿತ್ತೇ? ಅದು ಸಾಧ್ಯವಾಗದೆ ನಾನು ಬೆಂಗಳೂರಿನಲ್ಲಿ ಮನೆ ಕಟ್ಟಿದ್ದೇನೆ. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದೇನೆ. ನ್ಯಾಯಯುತ ದುಡಿಮೆಯಿಂದ ಸಾಧಿಸಿ ತೋರಿಸಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>