‘ಕಾಲು ಉರಿಗೆ ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದೆ. ಮುಷ್ಕರವಿದ್ದು, ವೈದ್ಯರು ಬರುವುದಿಲ್ಲವೆಂದು ಆಸ್ಪತ್ರೆಯಿಂದ ಹೊರಡಲು ಹೇಳಿದರು. ಕಾಲು ಉರಿ ಇನ್ನೂ ವಾಸಿ ಆಗಿಲ್ಲ. ನನ್ನ ಜೊತೆ ಇನ್ನೂ ಹಲವು ರೋಗಿಗಳಿಗೆ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಹೋಗುವಂತೆ ಸೂಚಿಸಿದರು’ ಎಂದು ಬಂಗಾರಪೇಟೆ ತಾಲ್ಲೂಕಿನ ರೆಡ್ಡಹಳ್ಳಿಯ ಯಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.