ನಂಗಲಿ, ಮುಳಬಾಗಿಲಿನ ಇಂಡ್ಲುಕೆರೆ, ಸೋಮೇಶ್ವರ ಪಾಳ್ಯದ ಕೆರೆ ಮತ್ತಿತರ ಕೆಲವು ಕೆರೆಗಳಲ್ಲಿ ಸ್ವಲ್ಪಮಟ್ಟಿಗೆ ನೀರಿದೆ. ಆದರೆ, ಉಳಿದ ಎಲ್ಲಾ ಕೆರೆಗಳಲ್ಲಿ ನೀರು ಇಂಗಿ ಹೋಗಿವೆ. ಕೆಲವು ಕಡೆ ಕೆರೆಯ ತೂಬು ಹಾಳಾಗಿ ಕೆರೆಗಳು ತುಂಬಿದಾಗ ಕೆರೆ ಕಟ್ಟೆಯೇ ನಾಶವಾಗಿದೆ. ಇದರಿಂದ ಅನೇಕ ಕೆರೆಗಳಲ್ಲಿ ನೀರಿಲ್ಲದೆ ಬಣಗುಡುತ್ತಿವೆ. ಇದರಿಂದ ಜಾನುವಾರುಗಳಿಗೆ ಮೇವಿಲ್ಲದೆ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.