ಮದುವೆಯಾದ ಸ್ವಲ್ಪ ದಿನ ಗಂಡ ಹೆಂಡತಿ ಚೆನ್ನಾಗಿದ್ದರು. ನಂತರದ ದಿನಗಳಲ್ಲಿ ಗಂಡ ಮಹೇಶ್ ರೆಡ್ಡಿ, ಅತ್ತೆ ವಿಜಯಮ್ಮ ಮತ್ತು ಮಾವ ಪ್ರಹ್ಲಾದ ರೆಡ್ಡಿ ಇನ್ನೂ ಗರ್ಭಿಣಿಯಾಗಿಲ್ಲ ಎಂದು ಮೂದಲಿಸತೊಡಗಿದರು. ಜತೆಗೆ ವರದಕ್ಷಿಣೆ ಹೆಚ್ಚಿಗೆ ತರುವಂತೆ ಪೀಡಿಸತೊಡಗಿದರು. ಆಗಾಗ್ಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಆಕೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೃತಳ ತಂದೆ ಆನಂದರೆಡ್ಡಿ ಆಂಡರಸನ್ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.