ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮಕ್ಕಳಾಗಿಲ್ಲ ಎಂದು ಮೂದಲಿಕೆ; ಗೃಹಿಣಿ ಆತ್ಮಹತ್ಯೆ

Published 29 ಮೇ 2023, 15:22 IST
Last Updated 29 ಮೇ 2023, 15:22 IST
ಅಕ್ಷರ ಗಾತ್ರ

ಕೆಜಿಎಫ್‌: ಮಕ್ಕಳು ಆಗಿಲ್ಲವೆಂದು ಗಂಡನ ಮನೆಯವರು ನೀಡುತ್ತಿದ್ದ ಕಿರುಕುಳ ತಾಳಲಾರದೆ ಗೃಹಿಣಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಜಿಎಫ್ ತಾಲ್ಲೂಕು ಕುರೂರು ಗ್ರಾಮದ ದಿವ್ಯಾ(23) ಮೃತ ಗೃಹಿಣಿ.

ಆಂಧ್ರಪ್ರದೇಶದ ನಾದಮಂತ್ರಂ ಗ್ರಾಮದ ಆನಂದರೆಡ್ಡಿ ಅವರ ಪುತ್ರಿ ದಿವ್ಯಾ ಅವರನ್ನು ಕೆಜಿಎಫ್ ತಾಲ್ಲೂಕು ಕುರೂರು ಗ್ರಾಮದ ಮಹೇಶ್ ರೆಡ್ಡಿ ಎಂಬುವರಿಗೆ ಕೊಟ್ಟು ಎರಡು ವರ್ಷದ ಹಿಂದೆ ಮದುವೆ ಮಾಡಲಾಗಿತ್ತು.

ಮದುವೆಯಾದ ಸ್ವಲ್ಪ ದಿನ ಗಂಡ ಹೆಂಡತಿ ಚೆನ್ನಾಗಿದ್ದರು. ನಂತರದ ದಿನಗಳಲ್ಲಿ ಗಂಡ ಮಹೇಶ್ ರೆಡ್ಡಿ, ಅತ್ತೆ ವಿಜಯಮ್ಮ ಮತ್ತು ಮಾವ ಪ್ರಹ್ಲಾದ ರೆಡ್ಡಿ ಇನ್ನೂ ಗರ್ಭಿಣಿಯಾಗಿಲ್ಲ ಎಂದು ಮೂದಲಿಸತೊಡಗಿದರು. ಜತೆಗೆ ವರದಕ್ಷಿಣೆ ಹೆಚ್ಚಿಗೆ ತರುವಂತೆ ಪೀಡಿಸತೊಡಗಿದರು. ಆಗಾಗ್ಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಆಕೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮೃತಳ ತಂದೆ ಆನಂದರೆಡ್ಡಿ ಆಂಡರಸನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳು ನಾಪತ್ತೆಯಾಗಿದ್ದಾರೆ. ಆಂಡರಸನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT